
ಮಹಿಳೆಯರ ಮೇಲೆ ದೌರ್ಜನ್ಯ
ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ನಿತ್ಯವೂ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಸ್ತ್ರೀಭ್ರೂಣಹತ್ಯೆ ಅನಾಗರೀಕ ಕೃತ್ಯ. ಇದರಿಂದ ಹೆಣ್ಣುಗಂಡಿನ ಜನಸಂಖ್ಯೆಯ ಅನುಪಾತದಲ್ಲಿ ಏರುಪೇರಾಗಿ ಸ್ತ್ರೀಕುಲ ಕಡಿಮೆಯಾಗುತ್ತಿರುವುದು ಅಪಮಾನಕರ ಸಂಗತಿಯಾಗಿದೆ. ನೋವನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳ ಗೋಳನ್ನು ಕೇಳುವವರೆ ಇಲ್ಲವಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ತಾಯಂದಿರು ಹಾಡಿದ ಒಂದು ತ್ರಿಪದಿ ನೆನಪಾಗುತ್ತಿದೆ;
ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ
ಅಲ್ಲಿ ಸನ್ಯಾಸಿ ಮಠಬೆಂದೊ ಹಾರುವರ
ಪಂಚಾಂಗ ಹತ್ತಿ ಉರಿದಾವೊ
ಈ ತ್ರಿಪದಿ ಈಗಲೂ ಪ್ರಸ್ತುತವೆಂದು ನನ್ನ ಭಾವನೆ. ಈ ಅತ್ಯಾಚಾರಿಗಳು ಎಷ್ಟೇ ಶ್ರೀಮಂತರಾಗಿರಲಿ, ಪ್ರಭಾವಶಾಲಿಗಳಾಗಿರಲಿ ನ್ಯಾಯಾಂಗ ಅವರಿಗೆ ಉಗ್ರಶಿಕ್ಷೆ ವಿಧಿಸಬೇಕೆಂದು ಕೋರುತ್ತೇನೆ.
ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ..
ನಿಮಗೆ ಇವೂ ಇಷ್ಟವಾಗಬಹುದು…




0 Comments