ಹೀಗೊಂದು simple ಕಥೆ..

ರಾಘವೇಂದ್ರ ಜೋಶಿ

ಎಲ್ಲೋ ಓದಿದ ಕತೆಯಿದು…

ನಾಗರಿಕತೆಯ ಸೋಂಕಿಲ್ಲದ ಒಂದು ಪುಟ್ಟ ಊರು. ಅಲ್ಲೊಂದಿಷ್ಟು ಜನ. ಓದು, ಬರಹ, ಟೀವಿ, ಫೇಸ್ ಬುಕ್ಕು, ಇಂಟರನೆಟ್ಟು- ಯಾವುದೂ ಗೊತ್ತಿಲ್ಲದ ಜನ. ತಮ್ಮ ಪಾಡಿಗೆ ತಾವು ಬೆಳೆ ಬೆಳೆದು, ಬೇಟೆಯಾಡಿ, ಆಗೀಗ ತಮ್ಮ ತಮ್ಮ ಹೆಂಗಳೆಯರೊಂದಿಗೆ ನರ್ತಿಸುತ್ತ ಇರುತ್ತಾರೆ. ಎಲ್ಲಿಂದಲೋ ಬಂದ ಪಾದ್ರಿಯೊಬ್ಬ ಈ ಊರನ್ನು ಪ್ರವೇಶಿಸುತ್ತಾನೆ. ಭಗವಂತನ ಲೀಲೆ ಮತ್ತು ಪಾಪ-ಪುಣ್ಯಗಳ ಬಗ್ಗೆ ಮಾತನಾಡುತ್ತ ಈ ಜನರ ತಲೆ ಕೆಡಿಸುತ್ತಾನೆ. ಪ್ರಾಣಿಹತ್ಯೆ ಪಾಪ ಅಂತೆಲ್ಲ ಹೇಳಿ ನರಕದ ಭಯ ಹುಟ್ಟಿಸುತ್ತಾನೆ. ಜನ ಕಂಗೆಡುತ್ತಾರೆ. ಭಯಭೀತರಾಗಿ ಬಿಲ್ಲು-ಬಾಣ ಕೆಳಗಿಡುವ ಹಂತದಲ್ಲಿದ್ದಾಗ-
ಆದಿವಾಸಿಗಳ ಮುದುಕನೊಬ್ಬ ಪಾದ್ರಿಗೆ ಕೈ ಜೋಡಿಸಿಕೊಂಡು ಪ್ರಶ್ನಿಸುತ್ತಾನೆ:
“ಗೊತ್ತಿಲ್ಲದೇ ತಪ್ಪು ಮಾಡಿದರೆ ಭಗವಂತ ಕ್ಷಮಿಸುತ್ತಾನೆಯೇ..?”
ಹೌದು ಅಂತ ಪಾದ್ರಿ ಹೇಳುತ್ತಾನೆ. ತಕ್ಷಣ ಆ ಮುದುಕ ಕಿರುಚಿ ಹೇಳುತ್ತಾನೆ:
“ಮತ್ಯಾಕೆ ಇದೆಲ್ಲ ಹೇಳಿ ನಮಗೆ ಗೊತ್ತುಪಡಿಸುತ್ತಿದ್ದೀರಿ..”
* ಕುಲಕುಲವೆಂದು ಹೊಡೆದಾಡುವ ಪಾದ್ರಿ, ಮಠಾಧೀಶ, ಸ್ವಾಮೀಜಿ, ಮುಲ್ಲಾಗಳನ್ನೊಮ್ಮೆ ಆ ಕಾಡಿನ ಊರಿಗೆ ಕರೆದುಕೊಂಡು ಹೋಗಬೇಕಿದೆ..
 

‍ಲೇಖಕರು G

April 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಜಯೇಂದ್ರ ಕುಲಕರಣಿ ಕಲಬುರಗಿ

    ಎಂತಹ ಸಂದೇಶ ! ಏನ್ಕಥೆ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: