ಹಾಳುಮಾತುಗಳನು ಹಿಂದೆ ಬಿಟ್ಟು…

ವಸಂತ ಬನ್ನಾಡಿ


ಗಾಳಿ ಕೊರಳನು ತಬ್ಬಿದೆ
ಕಡಲಿನ ಮೊರೆತ ಸನಿಹದಲೇ ಇದೆ
ಮಳೆಕಳೆದು ಬಿಸಿಲು ರಾಚುತ್ತಿದೆ
ಕಳಚಿ ಹಿಂದೆ ಬಿದ್ದಿವೆ
ಮಹಾನ್ ನಗರಗಳು
ಹೊಳೆಹೊಳೆವ
ಕೃತಕ ಬೆಳಕುಗಳ ಗೊಂಚಲಗಳು


ನಾನು ಹಿಗ್ಗಿದ ನನ್ನ ಚರಿತ್ರೆಯ
ಕುಬ್ಜತನವ ಕಂಡರಸುತ್ತಿದ್ದೇನೆ
ನನ್ನ ಕಣ್ಣು ಕಂಡಿದ್ದಷ್ಟೇ
ಜಗತ್ತು ಎಂದು ಕೊಂಡಿದ್ದವನು
ನನ್ನ ಸುಖವನಷ್ಟೇ
ಹಾಸಿ ಹೊದ್ದವನು
ನನ್ನ ಕುಣಿತ ಮಣಿತಗಳಲ್ಲಿಯಷ್ಟೇ
ಪರಮ ಲಾಸ್ಯ ಕಂಡವನು


ಕಳಚಿಡಬೇಕೀಗ
ವಸ್ತ್ರವಿಲಾಸಗಳನು
ಅಂಟಿದ ಬಣ್ಣ ಬಡಿವಾರಗಳನು
ಕಿಕ್ಕಿರಿದು ಹಿಂಬಾಲಿಸಿವೆ
ಒಣಮಾತುಗಳು
ನೆಮ್ಮದಿಯ ನೂರು ಸೂತ್ರಗಳು
ಅಡಗದು ದನಿಪೆಟ್ಟಿಗೆ ಕೇಳುವ
ಕಿವಿಗಳಿರುವ ತನಕವು


ನಡೆದಷ್ಟೂ ಹಾದಿ ಇದೆ
ದುಗುಡದ ಕೋಟೆ ಇದೆ
ನನ್ನ ಕಣ್ಣ ಮುಂದಿದೆ,

ಎಳೆ ಬೆಳಕು ಚಿಮ್ಮುತ್ತಿರುವ
ಕಪ್ಪು ಮಣ್ಣಿನ ಮೇಲೆ
ಜೋಲಿ ತಪ್ಪದೆ ನಡೆಯುತ್ತಿರುವ
ಮಗುವಿನ ಹಾಲು ಹೆಜ್ಜೆಗಳು

‍ಲೇಖಕರು Admin

October 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: