ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿದ ಆ ಒಂದು ಹಾಳೆ…

ಗಾಜು ಮತ್ತು ಇತರ ಕತೆಗಳು

ಬಿ ಎಂ ಬಶೀರ್

ಗುಜರಿ ಅಂಗಡಿ

ಹರಿದ ಹಾಳೆ
ಒಂದು ಸಾವಿರ ಪುಟಗಳ ಕೃತಿ ಅದು.
ಯಾರೋ ಮಧ್ಯದಲ್ಲಿ ಒಂದೇ ಒಂದು ಹಾಳೆಯನ್ನು ಹರಿದಿದ್ದರು.
ಅಷ್ಟೂ ದೊಡ್ಡ ಕೃತಿಯನ್ನು ಓದಿದ ಅವನು ಹರಿದ ಆ ಒಂದು ಹಾಳೆಯ ಕುರಿತಷ್ಟೇ ಚಿಂತಿಸ ತೊಡಗಿದ.
 
ಗಾಜು
‘‘ಸಂಬಂಧ ಒಡೆದರೆ, ಗಾಜು ಒಡೆದಂತೆ. ಮತ್ತೆ ಮುಟ್ಟಲು ಹೋದರೆ ಕೈ ಗಾಯವಾಗುತ್ತದೆ…’’
ಅವಳಿಗೆ ಯಾರೋ ಸಲಹೆ ನೀಡಿದರು.
‘‘ಕನಿಷ್ಟ ಇನ್ನೊಬ್ಬರ ಕಾಲಿಗೆ ತಾಗದ ಹಾಗೆ ಎತ್ತಿ ಎಸೆಯುವುದಕ್ಕಾದರೂ ಹೆಣ್ಣು ಆ ಗಾಜಿನ ಜೂರುಗಳನ್ನು ಮುಟ್ಟಲೇ ಬೇಕು…’’
ಅವಳು ಉತ್ತರಿಸಿದಳು.

ತಟ್ಟೆ
ಆತನಿಗೆ ಆ ಹೊಟೇಲ್‌ನಲ್ಲಿ ದಲಿತ ವೃದ್ಧನೊಬ್ಬನಿಗೆ ಪ್ರತ್ಯೇಕ ತಟ್ಟೆ.
ಯಾರೋ ಕೇಳಿದರು ‘‘ಪ್ರತಿಭಟಿಸು’’
ದಲಿತ ವೃದ್ಧ ಹೇಳಿದ ‘‘ಇಲ್ಲ…ಆ ನೀಚರು ಉಂಡ ತಟ್ಟೆಯಲ್ಲಿ ನಾನು ಊಟ ಮಾಡಲಾರೆ’’
 
ಯೋಧ
‘‘ನಿಜವಾದ ಯೋಧ ಹೇಗಿರಬೇಕು?’’
ಶಿಷ್ಯ ಸಂತನಲ್ಲಿ ಕೇಳಿದ.
‘‘ಅವನ ಶತ್ರುವು ಅವನನ್ನು ಇಷ್ಟಪಡಬೇಕು’’ ಸಂತ ಉತ್ತರಿಸಿದ.
 
ಗಡ್ಡ
‘‘ನೀನೊಬ್ಬ ಮುಸ್ಲಿಮನಲ್ಲವೆ? ಮತ್ತೇಕೆ ಗಡ್ಡವಿಡುವುದಿಲ್ಲ?’’ ಪಂಡಿತ ಅವನನ್ನು ತಡೆದು ಕೇಳಿದ.
ಅವನು ನಕ್ಕು ‘‘ನಮ್ಮ ಮನೆಯ ಮೇಕೆಗೂ ಗಡ್ಡವಿದೆ. ಅದಕ್ಕೆ’’ ಎಂದು ಹೇಳಿ ಮುಂದೆ ಹೋದ.
 
ಅಭಿವೃದ್ಧಿ
ಅಧಿಕಾರಿ ಬಂದು ಹೇಳಿದ ‘‘ದೇಶದ ಅಭಿವೃದ್ಧಿಗಾಗಿ ನೀನು ನಿನ್ನ ಭೂಮಿಯನ್ನು ಬಿಟ್ಟುಕೊಡಬೇಕು?’’
ರೈತನ ಕುಟುಂಬ ಬೀದಿಗೆ ಬಿತ್ತು. ಜೋಪಡಾ ಪಟ್ಟಿಯಲ್ಲಿ ವಾಸಿಸ ತೊಡಗಿದ. ಒಂದು ದಿನ ಅಧಿಕಾರಿಯ ಬಳಿ ಹೋಗಿ ಕೇಳಿದ ‘‘ಅದ್ಯಾವುದೋ ದೇಶದ ಅಭಿವೃದ್ಧಿಗಾಗಿ ನನ್ನ ಭೂಮಿ ಕಿತ್ತುಕೊಂಡಿರಿ. ಹೇಳಿ…ಆ ದೇಶ ಅಭಿವೃದ್ಧಿಯಾಯಿತೆ?’’
 

‍ಲೇಖಕರು G

16 November, 2013

12 Comments

  1. ಅಹಲ್ಯಾ ಬಲ್ಲಾಳ

    ‘ಯೋಧ’ ಇಷ್ಟವಾಯಿತು, ಬಷೀರ್.

  2. Sushma

    nice

  3. ಲಿಂಗರಾಜು ಬಿ.ಎಸ್.

    channagive…..

  4. Somashekhar R Konapure

    Nijakkoo Basheer awara kavana arthapurnawadadde.

  5. mmshaik

    maarmika..samaajamukhi

  6. Jagadisha D

    nice lines
    but
    ಸಂಬಂದಗಳು ಪಾರದರ್ಶಕವಾಗಿರುವುದಿಲ್ಲ ಎನಿಸುತ್ತಿದೆ.

  7. Anonymous

    nice

  8. yashu

    nice

  9. y k sandhya sharma

    gaaju odedare jodisalaagadiddaruu sambandha jodisabahudu,jodisabeku.gaayavadare maayuttade.

  10. bharathi b v

    Ishtavaythu ellavoo

  11. Raj

    Wonderful!

  12. Hema Sadanand Amin

    Iama big fan ofyou

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading