ನಟ ಆದಿತ್ಯರಲ್ಲಿದ್ದ ನಟನಿಗೆ ಸಾಣೆ ಹಿಡಿದ ಚಿತ್ರ ’ಎದೆಗಾರಿಕೆ’. ಆ ಚಿತ್ರದಲ್ಲಿ ಅವರ ನಟನೆ, ನಟನೆಯಲ್ಲಿ ಅವರು ಸಾಧಿಸಿದ ತನ್ಮಯತೆ ಎರಡೂ ಅಪಾರ ಮೆಚ್ಚುಗೆ ಗಳಿಸಿತು.
ಹಲವಾರು ಕಡೆ, ಹಲವಾರು ದೇಶಗಳಲ್ಲಿ ಪ್ರದರ್ಶನ ಕಂಡ ಈ ಚಿತ್ರ ಇಂದು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ತಮ್ಮ ಹರ್ಷ ಹಂಚಿಕೊಂಡಿದ್ದು ಹೀಗೆ :
“ಸಿನಿಮೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ. ಅದಕ್ಕೆ ತುಂಬಾ ಖುಷಿ.
ಸಿನಿಮಾಗೆ ಸುಮನ ತುಂಬಾ ಒಳ್ಳೆ ಸ್ಕ್ರಿಪ್ಟ್ ಕೊಟ್ಟಿದ್ದಾರೆ. ನಾನೂ ತುಂಬಾನೆ ಆಸಕ್ತಿಯಿಂದ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ.
ಇಂತಹ ಒಳ್ಳೆ ಚಿತ್ರ ಕೊಟ್ಟ ಸುಮನಾಗೆ ನನ್ನ ಸ್ಪೆಶಲ್ ಥ್ಯಾಂಕ್ಸ್!”








0 Comments