ಗೆಳೆಯರೇ,
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ನವಕರ್ನಾಟಕ ಪ್ರಕಾಶನ, ಗಾಂಧಿ ಬಜಾರಿನ ಅಂಕಿತ ಪುಸ್ತಕ, ಮಲ್ಲೇಶ್ವರಂನ ಸನ್ಮತಿ ಬುಕ್ ಹೌಸ್ ನಲ್ಲಿ ಶನಿವಾರ ಲಭ್ಯವಾಗಲಿದೆ. ಹಾಗೆಯೇ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಲ್ಲೂ ಅಂದೇ ಲಭ್ಯವಾಗಲಿದೆ.
ಚಂದಾದಾರರಿಗೆ ಅಂಚೆ ಮಾಡಲಾಗುತ್ತಿದ್ದು, ಶನಿವಾರ ಅಥವಾ ಸೋಮವಾರ (ಭಾನುವಾರ ಮಧ್ಯೆ ಬಂದಿದ್ದರಿಂದ) ಲಭ್ಯವಾಗಬಹುದು. ಎರಡನೇ ಸಂಚಿಕೆಯನ್ನು ಅತ್ಯಂತ ಆಪ್ತವಾಗಿ ರೂಪಿಸಿದ್ದು, ಕನ್ನಡ ಚಿತ್ರರಂಗದ ಬಗ್ಗೆಯೇ ಸಾಕಷ್ಟು ಗಮನ ಹರಿಸಲಾಗಿದೆ. ಅದರೊಂದಿಗೆ ವಿಶ್ವ ಸಿನಿಮಾದಿಂದ ಹಿಡಿದು ವಿವಿಧ ನೆಲೆಯ ಸುಮಾರು 20 ಕ್ಕೂ ಹೆಚ್ಚು ಲೇಖನಗಳು ಇವೆ.
ಪ್ರತಿ ಸಂಚಿಕೆಗೂ ತಮ್ಮ ಅಭಿಪ್ರಾಯವನ್ನು ನಮ್ಮ ಇಮೇಲ್ ಗೆ ಅಥವಾ ಸಂಚಿಕೆಯಲ್ಲಿರುವ ವಿಳಾಸಕ್ಕೆ ಕಳುಹಿಸಬಹುದು. ಹಾಗೆಯೇ ವಿವಿಧ ಅಂಕಣಗಳಿಗೂ ಲೇಖನಗಳನ್ನು ಕಳುಹಿಸಬಹುದು. ಮೂರನೇ ಸಂಚಿಕೆಯ ಕಾರ್ಯ ಪ್ರಾರಂಭವಾಗಿದೆ. ನಿಮ್ಮಲ್ಲಿ ಸಲಹೆಗಳಿದ್ದರೂ ಅದನ್ನೂ ಕಳುಹಿಸಬಹುದು.
ಈ ಮಧ್ಯೆ ಆ.21, 22 ರಂದು ಚಿತ್ರ ಶಿಬಿರ ಆಯೋಜಿಸಲಾಗಿದೆ ಕುಪ್ಪಳ್ಳಿಯಲ್ಲಿ. ಅದಕ್ಕೂ ಭಾಗವಹಿಸಬಹುದು. ಎರಡನೇ ಸಂಚಿಕೆಯ ಕುರಿತ ವಿಸ್ತೃತ ವಿಚಾರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. ಸಂಚಿಕೆ ಮತ್ತಿತರ ಮಾಹಿತಿಗೆ 99804 57812, 94807 97113, 94805 82027.
ಧನ್ಯವಾದಗಳೊಂದಿಗೆ
ಸಾಂಗತ್ಯ ಬಳಗ]]>
'ಸಾಂಗತ್ಯ' ಬಂತು
ನಿಮಗೆ ಇವೂ ಇಷ್ಟವಾಗಬಹುದು…





0 Comments