ಸವಿತಾ ನಾಗಭೂಷಣ ಕವಿತೆಗಳು

ಸವಿತಾ ನಾಗಭೂಷಣ

ಹೋಗೋಗು…..

ಸುಡಲು ಒಂದು ದಿಮ್ಮಿ ಸಾಕು!
ಅದೆಷ್ಟು ಮರ ಕಡಿಯುತ್ತೀಯ ?
ಹೋಗೋಗು…

ಉಡಲು ಇಷ್ಟಗಲ ಬಟ್ಟೆ ಸಾಕು!
ಅದೆಷ್ಟು ನೆಲ ಕದಿಯುತ್ತೀಯ ?
ಹೋಗೋಗು…

ಉಣಲು ಒಂದು ಹಿಡಿ ಅಕ್ಕಿ ಸಾಕು
ಅದೆಷ್ಟು ನದಿ ಬತ್ತಿಸುತ್ತೀಯ ?
ಹೋಗೋಗು….

ಹೃದಯ ಬರಡಾದರೆ
ಕಣ್ಣು ಕುರುಡಾದರೆ
ಬರದೆ ಕಾಡಿಸುವುದು ಮಳೆಗಾಲ
ಬಂದೇ ತೀರುವುದು ಬರಗಾಲ

ನಾಕು ತಾಸೋ ನಲವತ್ತು ಗಂಟೆಯೋ
ನಾಕು ವರುಷವೋ ಏಸು ವರುಷವೋ
ಉಳಿಗಾಲ? ಕಾದು ಬರುವುದೆ ಕೊನೆಗಾಲ?

ಹೋಗೋಗು…..
ಗಿಡ ನೆಡು, ಬಾವಿ ತೋಡು,
ನೆನೆಯುವರು ಮಂದಿ ನಿನ್ನ ಅರೆಗಳಿಗೆ
ನಡೆದುಕೊಂಡಂತೆ ಅವರವರ ದೇವರಿಗೆ !

ಮುಂದೆ ಒಂದು ದಿನ…
——————

ಬಾಳೆ ಕತ್ತರಿಸಿ ಎಸೆದಂತೆ
ಕಟ್ಟಡಗಳನ್ನು ನೆಲ ಸಮಗೊಳಿಸಿ
ಕೆರೆಕಟ್ಟೆಗಳನಾಗಿಸಿ
ಮಳೆ ನೀರು ತುಂಬಿಡುವರು
ಹೊಂಡ ಗುಂಡಿ ಗಿಂಡಿ ಎನದೆ
ನೀರು ತುಂಬಿಡುವರು !

ಬಾಳೆ ಕತ್ತರಿಸಿ ಎಸೆದಂತೆ
ಕಟ್ಟಡಗಳನ್ನು ಕಿತ್ತೆಸೆದು
ಭತ್ತ , ರಾಗಿ, ಜೋಳ
ಹೂವು ಹಣ್ಣು ಬೆಳೆವರು !

ಬಯಲಲ್ಲಿ ಬಿಸಿಲಿಗೆ ಮೈಯೊಡ್ಡಿ
ಬದುಕು ಮಾಡುವರು!
ರಾತ್ರಿ ಚಂದ್ರನ ಹೊದ್ದು ಮಲಗಿ
ಕನಸು ಕಾಣುವರು!

ಸಾಗರಗಳು ಸಾವಿರ ಇದ್ದರೂ
ಸಲಹದಿದ್ದರೆ ಸುಡುಗಾಡು !

‍ಲೇಖಕರು avadhi

June 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prakash konapur

    ಎರಡೂ ಕವಿತೆಗಳು ಅತ್ಯಂತ ಸೊಗಸಾಗಿವೆ ಅರ್ಥಪೂರ್ಣವಾಗಿವೆ

    ಪ್ರತಿಕ್ರಿಯೆ
  2. .ಮಹೇಶ್ವರಿ.ಯು

    ಸರಳ ಮಾತುಗಳಲ್ಲಿ ತಿಳಿಯಾದ ತತ್ವ.ಕವಿತೆಗಳು ಇಷ್ಟವಾದವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: