ಸ್ವಾಮಿ ಮಹಾಮನೆ
ಕಾವ್ಯ ಬದುಕಿನ ಉತ್ಸವ..
ಶ್ರೀನಿವಾಸ ಜಿ ಕಪ್ಪಣ್ಣ 75 ರ ಸಂಭ್ರಮ..
26/02/2023 ರ ಭಾನುವಾರ ಇಡೀ ದಿನ ಬೆಂಗಳೂರಿನ ನಿಮ್ಮ ‘ ಸಿವಗಂಗ ರಂಗಮಂದಿರ ‘ ದಲ್ಲಿ ಕಾವ್ಯ ಸಂಭ್ರಮ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಮತ್ತು ನನ್ನ ಗುರುಗಳಾದ ಕಪ್ಪಣ್ಣನವರಿಗೆ ಅಭಿನಂದನಾ ಕಾರ್ಯಕ್ರಮವಿದೆ.
ಈ ಉತ್ಸವದ ಸರ್ವಾಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡಿನ ಖ್ಯಾತ ಕವಿಗಳು.. ನನ್ನ ಗುರುಗಳಾದ ಡಾ.ಚಂದ್ರಶೇಖರ ಕಂಬಾರರು, ಹಾಗೂ ನಾಡಿನ ಹೆಸರಾಂತ ಕವಿಗಳು, ಕಲಾವಿದರು, ಹಾಡುಗಾರರು ಆಗಮಿಸುತ್ತಿದ್ದಾರೆ.
ಆತ್ಮೀಯರೆಲ್ಲರಿಗೂ ನಲ್ಮೆಯ ಸ್ವಾಗತ. ಈ ಕಾವ್ಯೋತ್ಸವ ಹಾಗೂ ಅಭಿನಂದನಾ ಸಂಭ್ರಮದಲ್ಲಿ ತಾವೆಲ್ಲರೂ ಪಾಲ್ಗೊಳ್ಳಿ
0 ಪ್ರತಿಕ್ರಿಯೆಗಳು