–ಕೆ. ವಿ. ತಿರುಮಲೇಶ್
ಪ್ರಿಯ ಜೋಗಿ,
ನಮ್ಮೆಲ್ಲರ ಮಿತ್ರ ಶೂದ್ರ ಶ್ರೀನಿವಾಸ್ ಅವರ ಬಗ್ಗೆ ನೀವು ಎಷ್ಟೊಂದು ಆಪ್ತವಾಗಿಯೂ ಬೆರಗಾಗಿಯೂ ಬರೆದಿದ್ದೀರಿ! ಧನ್ಯವಾದಗಳು.
ಅವರನ್ನು ನಾನೂ ಕೆಲವು ಸಲ ಭೇಟಿಯಾಗಿದ್ದಿದೆ; ಅವರ ಯೋಜನೆಗಳ ಕುರಿತು ಅವರ ಬಾಯಿಂದಲೇ ಕೇಳಿದ್ದಿದೆ. ಶ್ರೀನಿವಾಸ್ ಚೈನಾ ವರೆಗೂ ಹೋಗಿಬಂದರು ಎಂದು ತಿಳಿದು ನಾನು ಸಂತೋಷಪಟ್ಟಿದ್ದೇನೆ. ಅವರ ಕನಸಿಗೊಂದು ಕಣ್ಣಿನ ಯಾವುದೋ ಒಂದು ಸಂಪುಟಕ್ಕೆ ನಾನೊಂದು ಮುನ್ನುಡಿ ಬರೆದ ನೆನಪು. ಅದರಲ್ಲಿ ಅವರನ್ನು ನಾನು ಕನ್ನಡದ ಲಾಸ್ಟ್ ರೊಮ್ಯಾಂಟಿಕ್ ಎಂದು ಕರೆದಿದ್ದೆ. ಬಹುಶಃ ಈ ಬಿರುದಿಗೆ ಪಾತ್ರರಾಗುವ ಇನ್ನೂ ಹಲವು ಮಂದಿ ಇರಬಹುದು. ಆದರೂ ಯಾವುದೋ ಒಂದು ಅರ್ಥದಲ್ಲಿ ಶೂದ್ರನೇ ಲಾಸ್ಟ್ ರೊಮ್ಯಾಂಟಿಕ್ ಅನಿಸ್ತದೆ.
ಕೆಲವು ದಿನಗಳ ಹಿಂದೆ ನಾನವರ ಜತೆ ಫೋನ್ ನಲ್ಲಿ ಮಾತಾಡಿದ್ದೆ. ನನ್ನನ್ನು ಬೆಂಗಳೂರಿಗೆ ಕರೆಸಿ ಅದೇನೋ ಸಮಾರಂಭ ಮಾಡಬೇಕು ಎಂದು ಪಿತೂರಿ ಹೂಡುತ್ತಿದ್ದರು; ನನಗದು ಗೊತ್ತಾಗಿ ಬೇಡವೆಂದೆ. ಆದರೂ ನಾನವರನ್ನು ಕಂಡು ಬಹಳ ವರ್ಷಗಳೇ ಆದುವು. ಶೂದ್ರ ಪತ್ರಿಕೆ ಒಂದು ಕಾಲದಲ್ಲಿ ಕನ್ನಡದ ಅತಿ ಶ್ರೇಷ್ಠ ಚಿಕ್ಕ ಪತ್ರಿಕೆಯಾಗಿ ಬರುತ್ತಿತ್ತು; ನಂತರ ಅದು ಕುಂಟುತ್ತ ಸಾಗಿತು. ಅದನ್ನೆಲ್ಲ ನೀವು ಚೆನ್ನಾಗಿ ಗುರುತಿಸಿದ್ದೀರಿ.
ಶೂದ್ರ ಯಾವುದೋ ಮರದ ಕೆಳಗೆ ಕುಳಿತು ಅದನ್ನೇ ಬೋಧಿವೃಕ್ಷ ಎಂದು ಅಂದುಕೊಂಡು ಬುದ್ಧನಂತೆ ಕುಳಿತುಕೊಂಡಿರುವುದನ್ನು ನಾನು ಊಹಿಸುತ್ತಿದ್ದೇನೆ.
]]>
ಶೂದ್ರ, ಜೋಗಿ ಮತ್ತು ತಿರುಮಲೇಶ್
ನಿಮಗೆ ಇವೂ ಇಷ್ಟವಾಗಬಹುದು…




0 Comments