ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ
ಎಂದು ಕೇಳುತ್ತಲೇ ದಲಿತರ, ಶೋಷಿತರ ನೋವಿನ ಮೂಕ ಸಂವೇದನೆಗೆ
ಗಟ್ಟಿ ಧ್ವನಿಯಾಗಿ ಹಾಡಿದ
ಚೆನ್ನಣ್ಣ ಇನ್ನಿಲ್ಲ
-ಮಹಿಪಾಲರೆಡ್ಡಿ ಮುನ್ನೂರ್
ಅಣ್ಣ ಚೆನ್ನಣ್ಣ ವಾಲೀಕಾರ ಅಂದು ೧೯೮೪ರಲ್ಲಿ ಧರ್ಮಸ್ಥಳದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ದಲಿತ ಗೋಷ್ಠಿ ಆಯೋಜಿಸಲು,ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಹಂಪಾನಾ ಅವರಿಗೆ ಪತ್ರ ಬರೆದ ಕಾರಣ, ಪರಿಷತ್ತಿನ ಅಧ್ಯಕ್ಷರು ಸಾಹಿತ್ಯದಲ್ಲಿ ದಲಿತ ಬಲಿತ ಅನ್ನುವುದಿಲ್ಲ ಎಂದಿದ್ದರು.
ಅದರೂ ಚೆನ್ನಣ್ಣನವರ ಹೋರಾಟಕ್ಕೆ ಮಣಿದು ಗೋಷ್ಠಿ ಏರ್ಪಡಿಸಿದ್ದರು.
ಅಂದು ಚೆನ್ನಣ್ಣನವರ ಎದೆಯ ಬ್ಯಾನಿ(ದಲಿತರ) ಹೊರ ಹಾಕಲು ಅವಕಾಶ ಸಿಕ್ಕಿತು. ಅಲ್ಲಿಯಿಂದ ಇಂದಿನ ತನಕ ಕ್ರಾಂತಿ ಗೀತೆ ಹಾಡಿದ.
ಅಂದು ಎಲ್ಲರ ಎದೆಯ ಬ್ಯಾನಿ ನನ್ನದೆಂದು ಬದುಕು ಮಾಡಿದ,ಇಂದು ಅವರ ಎದೆಯ ಬ್ಯಾನಿ ನಾವ್ಯಾರೂ ಹೊರಲಾಗದೆ ಅಸಹಾಯಕರಾದ್ದೇವೆ.
-ಪ್ರೊ.ಎಚ್.ಟಿ. ಪೋತೆ.
ಕಣ್ಣೀರ ತರ್ಪಣ