ಶೋಭಾ ಹಿರೇಕೈ ಕಂಡ್ರಾಜಿ
ನಾನು ನೀನು
ಏನು?
ನೀರು -ಮೀನು
ಭೂಮಿ – ಬಾನು
ಹಾಲು – ಜೇನು
ಅಲ್ಲ…
ನಾನು ನೀನೇ.. ಅಂದಿದ್ದೆ.
ಕಬ್ಬಿಣದ ಸರಳುಗಳಿಗೆ
ಕರುಣೆ ಕಲಿಸು
ಪ್ರಭುವೇ.. ಎಂದು
ನಾನಿಲ್ಲಿ ಪ್ರಾರ್ಥಿಸುತ್ತಿದ್ದೆ
ಮತ್ತೂ… ನೀನದಕ್ಕೆ
ಬಂಗಾರದ ಬಣ್ಣ ಬಳಿಯಲು
ಕುಂಚ ಹಿಡಿದು ನಿಂತು ಬಿಟ್ಟಿದ್ದೆ.
ಮುತ್ತು ಕೊಡುವ ಭರದಲ್ಲಿ ಕಣ್ಣಿಗೆ,
ಮಾತು ಕಲಿಸುವ ನೆಪದಲ್ಲಿ
ತುಟಿಯ ಎರಡೂ ಕದಗಳಿಗೆ
ಚಿಲಕ ಹಾಕಿದ್ದು
ಗೊತ್ತಾಗುವುದರೊಳಗೆ ನೀ..
ಲೋಕ ಸಂಚಾರಕ್ಕೆ ಹೊರಟು ಹೋಗಿದ್ದೆ.
ಕೇಳು ಲೋಕ ಸಂಚಾರಿಯೇ
ನೀನು ಹೇಳಿದ
ನೀಲಿ ಕಡಲಿನ ನಟ್ಟ ನಡುವಿರುವ
ಕಂದು ಬೆಟ್ಟದ
ಹಳದಿ ಹೂಮರದ ಹಾದಿ ನೆನಪಿದೆ ನನಗಿನ್ನೂ..
ಇಲ್ಲೊಮ್ಮೆ ಚಿಲಕ ಸಡಿಲಿಸಿ ಬಿಡು
ನಾನೂ ಹಾರುವೆ ನಿನ್ನೊಂದಿಗೆ
ಲೋಕ ನೋಡುವೆ
ನನ್ನದೇ ಹಾಡೊಂದಿಗೆ.
ಚೆಂದಿದೆ ಶೋಭಾ
ಅವನನ್ನೇನು ಕೇಳ್ತೀರ,,, ಬಾಗಿಲು ಒದ್ದು ಚಿಲಕ ಕಳಚಿಸಿಕೊಂಡು ಹೋಗಿ ನೀವೊಬ್ಬರೇ ತ್ರಿಲೋಕ ಸಂಚಾರಕ್ಕೆ ,,,
ಕವನ ಚೆನ್ನಾಗಿದೆ.
ಚಂದದ ಕವಿತೆ
ಉತ್ತಮ ಕವಿತೆ