ಜೀವಿಯವರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ
ನನಗೆ ತುಂಬಾ ಇಷ್ಟವಾದದ್ದು
“ನಮ್ಮ ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕ ಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ. ಪ್ರಜೆಗಳಾದ ನಾವು ಇಂಥಾ ವರ್ಗದಿಂದ ಬೇರೆಯಾಗಿ ತಲೆ ತುಂಬ ಕಲಿಯೋಣ, ತಲೆ ಎತ್ತಿ ನುಡಿಯೋಣ”
ಎಂಬ ವಾಕ್ಯ, ಇಂಥಾ ಮಾತನ್ನು ಹೇಳಬೇಕಾಗಿದೆ ಎಂದು ಅವರಿಗೆ ಅನ್ನಿಸಿದ್ದು, ಮತ್ತು ಈ ವಯಸ್ಸಿನಲ್ಲಿಯೂ ಅವರು ಅದನ್ನು ಹೇಳಬಲ್ಲ ಧೈರ್ಯ ಮಾಡಿದ್ದು
–ರಾಮಚಂದ್ರ ದೇವ







ತುಂಬಿದ ಸಭೆಯಲ್ಲಿ ರಾಜಕಾರಣಿಗಳು ತಮ್ಮ ಮಗ್ಗುಲಲ್ಲೇ ಕುಳಿತಿರುವಾಗ ಈ ಮಾತು ಹೇಳುವುದು ಜಿ.ವಿಯವರೊಬ್ಬರಿಂದಲೇ ಸಾಧ್ಯ ನನಗಂತೂ ಬಹಳ ಬಹಳ ಖುಷಿಯಾಯಿತು. ಅವರು ಹೇಳಿದ್ದಕ್ಕೆ ಈ ಮಾತಿಗೆ ಇಷ್ಟೊಂದು ಬೆಲೆ ಬಂತು!