ರಂಗಾಯಣದಲ್ಲಿ ‘ಮುಟ್ಟಿಸಿಕೊಂಡವನು’

ಪಿ. ಲಂಕೇಶ್‌ರವರ `ಮುಟ್ಟಿಸಿಕೊಂಡವನು’ನಾಟಕದ ಪ್ರಥಮ ಪ್ರದರ್ಶನ

ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪಿ. ಲಂಕೇಶ್ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು. ಅವರು ಬರೆದ ಹಲವಾರು ವಿಶೇಷ ಕಥೆಗಳಲ್ಲಿ ‘ಮುಟ್ಟಿಸಿಕೊಂಡವನು’ ಕಥೆಯು ಕೂಡ ಒಂದಾಗಿದೆ.

ಜಾತಿ ಪದ್ಧತಿ ಶತಶತಮಾನಗಳ ಕಾಲದಿಂದಲೂ ಬೆಳೆದು ಬಂದಿರುವ ಕ್ರೂರ ಪದ್ಧತಿ, ಜಾತಿಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ನೋಡುವ ಮೌಢ್ಯ, ಆ ನೆಲೆಯಲ್ಲಿ ನಡೆದ ಶೋಷಣೆ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ. ಶಿಕ್ಷಣ, ನಗರೀಕರಣ, ವಿಜ್ಞಾನದ ಬೆಳವಣಿಗೆಗಳಿಂದಲೂ ನಮ್ಮ ದೇಶ ಜಾತಿ ಪದ್ಧತಿಯಿಂದ ಮುಕ್ತವಾಗದಿರುವುದು ನಮ್ಮ ದುರಂತ. ವ್ಯಕ್ತಿ ವ್ಯಕ್ತಿಯ ನಡುವಿನ ತಾರತಮ್ಯ ಭಾವವಳಿದು ಮಾನವೀಯವಾಗಿ ನೋಡುವ ಗುಣ ಬೆಳೆಯಬೇಕಾಗಿದೆ ಮತ್ತು ಶರಣರ, ಸಂತರ ಸಮಾನತೆಯ ಆಶಯ ಸಾಕಾರಗೊಳ್ಳಬೇಕಿದೆ. ಬದಲಾವಣೆಗಾಗಿ ಹಂಬಲಿಸುತ್ತಿರುವ ಸಮಾಜಕ್ಕೆ ಬಿಡುಗಡೆಯ ದಾರಿಯನ್ನು ತೋರಿಸುವ ದಿಕ್ಕಿನಲ್ಲಿ ಈ ಕತೆ ಮಹತ್ವದ್ದಾಗಿದೆ.

ಮೈಸೂರು ರಂಗಾಯಣವು ಕೆ.ಆರ್. ನಂದಿನಿ ಅವರ ನಿರ್ದೇಶನದಲ್ಲಿ ರಂಗಾಯಣದ ಹಿರಿಯ ಕಲಾವಿದರು ಪ್ರಸ್ತುಪಡಿಸುತ್ತಿರುವ `ಮುಟ್ಟಿಸಿಕೊಂಡವನು’ನಾಟಕದ ಪ್ರಥಮ ಪ್ರದರ್ಶನವನ್ನು 2023 ಆಗಸ್ಟ್ 20 ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ನಾಟಕ:ಮುಟ್ಟಿಸಿಕೊಂಡವನು
ರಚನೆ:ಪಿ. ಲಂಕೇಶ್
Aಗೀತ ವಿನ್ಯಾಸ :ಪ್ರಶಾಂತ್ ಹಿರೇಮಠ
ರಂಗವಿನ್ಯಾಸ :ಹೆಚ್.ಕೆ. ದ್ವಾರಕಾನಾಥ್
ಬೆಳಕಿನ ವಿನ್ಯಾಸ :ಮಹೇಶ್ ಕಲ್ಲತ್ತಿ
ರಂಗರೂಪ, ನಿರ್ದೇಶನ :ಕೆ.ಆರ್. ನಂದಿನಿ

‍ಲೇಖಕರು avadhi

August 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: