ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಭೂಮಿ ಕ್ರಿಯಾ ಸಮಿತಿ ಹಾಗೂ ಬಸವ ಇಂಟರ್ ನ್ಯಾಷನಲ್ ಫೌಂಡೇಷನ್, ಲಂಡನ್ ತಂಡಗಳು ‘ರಂಗಭೂಮಿ ಮತ್ತು ಚಲನಶೀಲತೆ ಒಂದು ಅವಲೋಕನ’ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದವು.
ಅವಧಿ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಇಂದು ರಂಗಭೂಮಿಯ ಅಂತಃಸತ್ವ ವನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಯೋಗ ರಂಗದ ಮುಖ್ಯಸ್ಥ ಕೆ ವಿ ನಾಗರಾಜಮೂರ್ತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ರಂಗಾಯಣದಲ್ಲಿ ಜರುಗಿದ ಇತ್ತೀಚಿನ ವಿದ್ಯಮಾನ ರಂಗಭೂಮಿಗಿದ್ದ ಹಿರಿಮೆಯನ್ನು ಕಳೆದಿದೆ ಎಂದು ವಿಷಾದಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಜೆ ಲೋಕೇಶ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಜಂಟಿ ನಿರ್ದೇಶಕರಾದ ಸಿಂ ರ ಹೊನ್ನಲಿಂಗಯ್ಯ ಅವರು ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು