ಕನ್ನಡದ ವೈಚಾರಿಕ ಪ್ರಜ್ಞೆ ಯು ಆರ್ ಅನಂತಮೂರ್ತಿ ಇನ್ನಿಲ್ಲ.
ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ನಮ್ಮಿಂದ ದೂರಾದರೂ, ಅವರ ಅಗಲಿಕೆ ನಮಗೆ ಹಠಾತ್ ನಿರ್ಗಮನದಂತೆಯೇ ಕಾಣುತ್ತದೆ. ಅದಕ್ಕೆ ಕಾರಣ ನಮ್ಮ ಜನ ಮನದ ಜೊತೆ ಅವರು ಬೆರೆತಿದ್ದ ರೀತಿ, ನಮ್ಮ ದೈನಂದಿನ ತುಮುಲಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ. ಯಾವುದೇ ಸಾಮಾಜಿಕ ಸಂಘರ್ಷದಲೂ ಅವರ ದನಿ ಇರುತ್ತಿತ್ತು. ಯಾವುದೇ ಸಾಮಾಜಿಕ ಅಸಮಾನತೆ ನಡೆದಾಗಲೂ ನಮ್ಮ ಕಣ್ಣು ಅವರ ಕಡೆ ಹೊರಳುತ್ತಿತ್ತು. ಮಾತನಾಡುತ್ತಾ ಆಡುತ್ತಾ ಇದ್ದಕ್ಕಿದ್ದಂತೆ ಮೇಷ್ಟರು ಹೊರತು ಹೋಗಿದ್ದಾರೆ.
ಮೇಷ್ಟ್ರೇ ನಿಮ್ಮನ್ನು ನಾವು ಕಳೆದುಕೊಂಡೆವು…
0 ಪ್ರತಿಕ್ರಿಯೆಗಳು