ಯು ಬಿ ಪವನಜ ತೇಜಸ್ವಿ ಬಗ್ಗೆ…

ತೇಜಸ್ವಿ ನನಗೆ ತುಂಬ ಇಷ್ಟವಾದುದು ಅವರು ವಿಜ್ಞಾನ ಸಾಹಿತ್ಯ ಬರೆದುದಕ್ಕೆ ಮತ್ತು ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಗೆ. ಮೂಡಿಗೆರೆಯ ಅವರ ಮನೆಗೆ ಎರಡು ಬಾರಿ ಭೇಟಿ ನೀಡಿದ್ದು ಇನ್ನೂ ನೆನಪಿನಲ್ಲಿದೆ. ತೇಜಸ್ವಿಯವರ ವಿಜ್ಞಾನ ಸಾಹಿತ್ಯ ಸೃಷ್ಠಿಯ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಿರುತ್ತೇನೆ.
pavanaja5ಮುಖ್ಯವಾಗಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಶ್ ಮಾಧ್ಯಮದ ಬಗ್ಗೆ ಚರ್ಚೆ ಬಂದಾಗ. ಒಂದನೆ ತರತಿಯಿಂದಲೆ ಇಂಗ್ಲಿಶ್ ಮಾಧ್ಯಮದ ಅಗತ್ಯದ ಬಗ್ಗೆ ಪ್ರತಿಪಾದಿಸುವವರ ಒಂದು ಪ್ರಮುಖ ವಾದವೆಂದರೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಪ್ರಪಂಚದ ಇತ್ತೀಚೆಗಿನ ಜ್ಞಾನ, ಮುಖ್ಯವಾಗಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ್ದು, ದೊರಕುವುದಿಲ್ಲ; ಆದುದರಿಂದ ಒಂದನೆ ತರಗತಿಯಿಂದಲೇ ಇಂಗ್ಲೀಶಿನಲ್ಲಿ ಕಲಿಯಬೇಕು ಎಂದು. ಇದಕ್ಕೆ ಪರಿಹಾರ ಕನ್ನಡದಲ್ಲಿ ಪ್ರಪಂಚ ಜ್ಞಾನ ತರುವುದೇ ವಿನಾ ಒಂದನೇ ತರಗತಿಯಿಂದ ಇಂಗ್ಲೀಶಿನಲ್ಲಿ ಕಲಿಯುವುದಲ್ಲ.
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬರೆದ ಕೆಲವೇ ಕೆಲವು ಸಾಹಿತಿಗಳಲ್ಲಿ ತೇಜಸ್ವಿ ಒಬ್ಬರು. ಇನ್ನೊಬ್ಬ ಪ್ರಮುಖರು ಶಿವರಾಮ ಕಾರಂತರು. ಇವರಿಬ್ಬರ ಹೊರತಾಗಿ ವಿಜ್ಞಾನ ಸಾಹಿತ್ಯ ಬರೆದವರೆಲ್ಲ ವಿಜ್ಞಾನಿಗಳು ಆಥವಾ ವಿಜ್ಞಾನದಲ್ಲಿ ಪದವಿ ಪಡೆದವರು. ಇಂತಹವರ ಸಂಖ್ಯೆ ಖಂಡಿತ ಹೆಚ್ಚಾಗಬೇಕು.

‍ಲೇಖಕರು avadhi

April 4, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dr. BR. Satyanarayana

    ಇಂಗ್ಲಿಷ್ ವಿಷಯ ಬಂದಾಗ, ನಯನ ಸಭಾಂಗಣದಲ್ಲಿ ತೇಜಸ್ವಿ ಹೇಳಿದ್ದ ಇನ್ನೊಂದು ಮಾತು ನೆನಪಿಗೆ ಬರುತ್ತದೆ. ‘ವ್ಯವಹಾರಕ್ಕೆ ಬೇಕಾದಷ್ಟು ಇಂಗ್ಲಿಷ್ ಸಾಕು. ಅದಕ್ಕೆಲ್ಲ ಹೆಚ್ಚೆಂದರೆ ನೂರೈವತ್ತು ಇನ್ನೂರು ಇಂಗ್ಲಿಷ್ ಪದಗಳು ಸಾಕು. ಆದರೆ ಅಷ್ಟನ್ನೂ ಕಲಿಸಬಲ್ಲ ಮೇಷ್ಟ್ರು ನಮ್ಮಲ್ಲಿಲ್ಲ!’ ಎಂದಿದ್ದರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: