ಯಡಿಯೂರಪ್ಪನವರಿಗೆ ವರವಾಗಲಿರುವ ಆ ಹ್ಯೂಮನ್ ರೀ ಪ್ರೊಡಕ್ಷನ್ ವಿಜ್ಞಾನಿ ಯಾರು ?
***********************************
ಶಿವಕುಮಾರ್ ಮಾವಲಿ
ಹದಿನೈದು ದಿನದಲ್ಲಿ ಒಂಭತ್ತು ಮನುಷ್ಯರನ್ನು ಹುಟ್ಟಿಸುವುದು ಹೇಗೆ ?
ಅದೇನು ಕಷ್ಟ ಅಂತೀರಾ? ನೋ ನೆವರ್. ಇಂದು ವಿಜ್ಞಾನ ಮುಂದುವರಿದಿದೆ ಸ್ವಾಮಿ .
ಎಲ್ಲಿದ್ದೀರಾ ನೀವು ? ಒಂಬತ್ತು ತಿಂಗಳು ಹೊತ್ತು ಹೆತ್ತು ಎನ್ನೋ ಫಿಲ್ಮ್ ಡೈಲಾಗ್ ಗಳೆಲ್ಲ ವರ್ಕ್ ಔಟ್ ಆಗೋದಿಲ್ಲ .
ಪಾಪ ನಾನು ಸಿಎಮ್ ಆಗೇಬಿಟ್ಟೆ ಅಂತ ನಿನ್ನೆ ಬೆಳಗ್ಗೆನೇ ಸೆಲೆಬ್ರೇಷನ್ ಮೂಡ್ ನಲ್ಲಿದ್ದ ಯಡಿಯೂರಪ್ಪ ಅವರಿಗೆ ಬಿಸಿಲು ಜಾಸ್ತಿಯಾದಂತೆ ಕಮಲದ ಕೆಲವು ಪಕಳೆಗಳು ಅರಳದೆ ನಿರಾಸೆಯಾಯಿತು .

ಆದರೇನು ಅವರು ಛಲಬಿಡದ ತ್ರಿವಿಕ್ರಮ. ಕಾಂಗ್ರೆಸ್ -ಜೆಡಿಎಸ್ ವಿಲೋಮ ಮೈತ್ರಿ ಚಿಗುರೊಡೆದ ಬೆನ್ನಲ್ಲೇ ತನಗೆ ಸಿಎಮ್ ಸ್ಥಾನ ಕೈತಪ್ಪುವುದೆಂದು ಅನುಮಾನ ಉಂಟಾಗಿದ್ದೇ ತಡ . ರಾಜ್ಯ ಭವನದ ಬಾಗಿಲು ತಟ್ಟಿ ಹಠ ಹಿಡಿದು ನಾಳೆ ಪ್ರಮಾಣ ವಚನ ಸ್ವೀಕರಿಸಿಯೇ ತೀರುತ್ತೇನೆ ಎಂದು ದುಂಬಾಲು ಬಿದ್ದಿದ್ದರಿಂದ ರಾಜ್ಯಪಾಲರು ದೇಶದ ಅತೀ ಮುಖ್ಯ ಕಾರ್ಯ ಇದಾಗಿರುವುದರಿಂದ ಸುಪ್ರೀಂ ಕೋರ್ಟ್ ಬಾಗಿಲು ತೆಗೆಯುವದರೊಳಗೆ ಪ್ರಮಾಣ ವಚನದ ಸಮಯ ನಿಗದಿ ಮಾಡಿಕೊಟ್ಟಿದ್ದಾರೆ .
ಇಷ್ಟೆಲ್ಲ ಸಹಾಯ ಸಿಕ್ಕಮೇಲೂ ಶ್ರೀಯುತರಿಗೆ ಎದುರಾಗಿರೋ ಸಮಸ್ಯೆ ಏನು ಗೊತ್ತಾ ?
ಸಂಖ್ಯಾಬಲ ಇಲ್ಲದಿರುವುದು .
ಬಿಜೆಪಿ ಬಳಿ ಕೇವಲ 104 ಶಾಸಕರು ಮಾತ್ರ ಇದ್ದು ಬಹುಮತ ಸಾಬೀತು ಮಾಡಲು 113 ಬೇಕಲ್ಲವೆ ?
ಇದಕ್ಕೇನು ಅರ್ಜೆಂಟ್ ಇಲ್ಲ . ರಾಜ್ಯಪಾಲರು ಹದಿನೈದು ದಿನಗಳ ಕಾಲಾವಕಾಶ ಕೊಟ್ಟಿದ್ದಾರೆ . ಆದರೆ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಇತರೆ ಎರಡು ಶಾಸಕರು ಬಿಟ್ಟು ಬೇರ್ಯಾರು ಇಲ್ಲದ ಕಾರಣ ಅನಿವಾರ್ಯ ವಾಗಿ ಮಾಡರ್ನ್ ಸೈನ್ಸ್ ನ ಮೊರೆ ಹೋಗಿದ್ದಾರೆ . ಈಗ ಅವರಿಗಿರುವ ಹದಿನೈದು ದಿನದಲ್ಲಿ ಒಂಭತ್ತು ಜನರನ್ನು ಉದ್ಭವಿಸಬೇಕಾಗಿದೆ( Produce ಎಂದರೂ ಆಗುತ್ತದೆ) . ನೀವು ನನ್ನ ಪೊಲಿಟಿಕಲ್ ಅಜ್ಞಾನ ವನ್ನು ಅವಮಾನಿಸಬೇಕಿಲ್ಲ . ಇದಕ್ಕೆ ಸುಲಭ ದಾರಿಗಳಿವೆ ಎಂದು ನೀವು ಹೇಳಬಹುದು .
ಆದರೆ ಇದು ಬಿಜೆಪಿ ಸ್ವಾಮಿ A party with difference . ಹಾಗೆಲ್ಲ ಕುದುರೆ ವ್ಯಾಪಾರ ಮಾಡಿ ಬೇರೆ ಪಕ್ಷದ ಶಾಸಕರನ್ನು ದುಡ್ಡು ಕೊಟ್ಟು ಕೊಂಡು ಕಾಂಗ್ರೆಸ್ ನಂಥ ಭ್ರಷ್ಟಚಾರ ಮಾಡಲು ಸನ್ಮಾನ್ಯ ಪ್ರಧಾನಿಗಳು ಯಾವ ಕಾರಣಕ್ಕೂ ಒಪ್ಪಲಾರರು . ಅದು ದೇಶದ್ರೋಹವಲ್ಲದೆ ಮತ್ತಿನ್ನೇನು ??
ನೆವರ್ ಹಾಗಾಗಲು ಅವರು ಯಾವ ಕಾರಣಕ್ಕೂ ಒಪ್ಪುವುದಿಲ್ಲ . ಭ್ರಷ್ಟಾಚಾರವನ್ನು ಸುತಾರಾಂ ಅವರು ಒಪ್ಪದ ಕಾರಣ ಪಕ್ಷೇತರರು ಎರಡು ಜನ ಮಾತ್ರ ಇರುವ ಕಾರಣ ಯಡಿಯೂರಪ್ಪನವರಿಗೆ ಈ ವಿಜ್ಞಾನ ವರವಾಗಲಿದೆ .
ಶಾಮಿಥ್ ಎಂಬ ವಿಜ್ಞಾನಿಯ ನೆರವಿನಿಂದ ಅವರೀಗ ಅನಿವಾರ್ಯವಾಗಿ ಕೇವಲ ಹತ್ತು ದಿನಗಳಲ್ಲಿ ಒಂಭತ್ತು ಜನ ( ಗಂಡು ಅಥವಾ ಹೆಣ್ಣು) ವ್ಯಕ್ತಿಗಳನ್ನು ವೇಗವಾಗಿ ಡೆಲವರಿ ಮಾಡಿ, ಅವ್ರಿಗೆ ಅಂಗಿ ,ಚೊಣ್ಣ , ಆಟ ,ಊಟ,ಶಾಲಾ-ಕಾಲೇಜು ,ಎಲ್ಲ ಮುಗ್ಸಿ ಎಲೆಕ್ಷನ್ ಗೆ ನಿಲ್ಸಿ ಗೆಲ್ಸಕೋಂಡ್ ಬರ್ಬೇಕು . ಅರೆ ಯಾರ್ ಇಟ್ಸ್ ನಾಟ್ ಎಟ್ ಆಲ್ ಡಿಫಿಕಲ್ಟು . ಇವೆಲ್ಲವನ್ನು ಫಾಸ್ಟ್ ಟ್ರ್ಯಾಕ್ ನಲ್ಲಿ ಮಾಡಿ ಮೇ ೨೭ ರಂದು ರಾಜ್ಯಪಾಲರ ಮುಂದೆ ಸಾಲಿಗೆ 113 ಶಾಸಕರನ್ನು ನಿಲ್ಲಿಸಿದರಾಯ್ತು . ಈ ಹೊಸದಾಗಿ ಹುಟ್ಟಿಸಿದ ಒಂಭತ್ತು ಜನರನ್ನು ಒಂದೇ ಕಡೆ ನಿಲ್ಲಿಸದೆ ಅಲ್ಲಲ್ಲಿ ನಿಲ್ಲಿಸಿದರಾಯ್ತು .
ಇದೇನ್ ಮಹಾ ಕಷ್ಟದ ಕೆಲಸಾನಾ ? ಒಂದು ಮಾಹಿತಿಯ ಪ್ರಕಾರ ಈಗಾಗಲೇ ಇಂತಹ ತುರ್ತು ಜನನ ಮಾಡಿಸುವಲ್ಲಿ ನಿಪುಣನಾಗಿರುವ ಸೈಂಟಿಸ್ಟ್ ಒಬ್ಬರು ಅವರಿಗೆ ಸಿಕ್ಕಿದ್ದಾರೆ ಎನ್ನಲಾಗಿದೆ .
ಅಯ್ಯೋ ಇಷ್ಟೆಲ್ಲ ಯಾಕೆ ಕಷ್ಟ ಪಡ್ಬೇಕು ಆಪರೇಷನ್ ಕಮಲ ಮಾಡ್ಬೋದಲ್ಲ ಅಂತ ಏನಾದರೂ ನೀವು ಕೇಳಿದ್ರೆ ಭ್ರಷ್ಟಾಚಾರದ ವಿರುದ್ದ ಹರಿಹಾಯುವ ಪ್ರಧಾನಿ ಮತ್ತು ಅಧ್ಯಕ್ಷ ರು ಯಾವ ಕಾರಣಕ್ಕೂ ಇದನ್ನು ಒಪ್ಪಲಾರರಂತೆ. ದೇಶಾದ್ಯಂತ ನಮ್ ಇಮೇಜ್ ಏನಾಗುತ್ತೆ ಅಂತ ಬೈದ್ ಬಿಡ್ತಾರಂತೆ . ಹಾಗಾಗಿ ನಾಳೆ ಪ್ರಮಾಣ ವಚನ ಮುಗಿದ ನಂತರ ಈ ಹುಮನ್ ಪ್ರೊಡಕ್ಟಿವಿಟಿ ಕೆಲಸದಲ್ಲಿ ತೊಡಗಿಕೊಳ್ಳಲೇ ಬೇಕಾದ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಇದೆ .

ಯಾರೋ ಕೆಲವರು ಹೇಳಿದರಂತೆ “Don’t sell the skin before you have caught the bear ” ಆದ್ರೆ ಅದನ್ನೆಲ್ಲಾ ಕೇಳೊಲ್ಲ . ಇಷ್ಟೊಂದು ವಿಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಹದಿನೈದು ದಿನದಲ್ಲಿ ಕೇವಲ ಒಂಭತ್ತು ಜನರನ್ನು ಹುಟ್ಟಿಸೋದು ಕಷ್ಟವೇ . ದೇಶದ ,ಅವಶ್ಯಬಿದ್ದರೆ ವಿದೇಶಗಳಿಂದಲೂ ವಿಜ್ಞಾನಿಗಳನ್ನು ತಂದು ತಮ್ಮೆದರು ನಿಲ್ಲಿಸಲು IT Cell ಗೆ ತಿಳಿಸಲಾಗಿದೆಯಂತೆ .
ಕೇವಲ ಹದಿನೈದು ದಿನದ ಈ ಸೈಂಟಿಸ್ಟ್ ಹುದ್ದೆಗೆ ಭಾರೀ ಪ್ಯಾಕೇಜ್ ಕೂಡ ನೀಡಲಾಗುವುದು ಎಂದು ಅವರು ಹೇಳಿದ್ದಾರೆ . ಹ್ಯೂಮನ್ ರೀ ಪ್ರೊಡೆಕ್ಷನ್ ವಿಷಯದಲ್ಲಿ ಪರಿಣಿತಿ ಪಡೆದ ಯಾವುದೇ ನುರಿತ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು .
ಯಾವ ಕಾರಣಕ್ಕೂ ಅನೈತಿಕವಾಗಿ ಅಧಿಕಾರ ಹಿಡಿಯಲು ಇಚ್ಛೆ ತೋರದೆ, ವಿಜ್ಞಾನ ವನ್ನು ಆಶ್ರಯಿಸಿದ ಜಗತ್ತಿನ ಮೊದಲ ಪೊಲಿಟಿಷಿಯನ್ನ ಎಂದೂ ಕೂಡ ಇವರನ್ನು ಅಂತರಾಷ್ಟ್ರೀಯ ಚಾನೆಲ್ ಗಳಲ್ಲಿ ಹೊಗಳಲಾಗುತ್ತಿದೆ . ಸಾಕಷ್ಟು ದುಡ್ಡಿದ್ದರೂ ಬೇರೆ ಪಕ್ಷದ ಶಾಸಕರಿಗೆ ಗಾಳ ಹಾಕದೆ ಇಂತಹ ಪ್ರಾಮಾಣಿಕ ವಿಸ್ಮಯವನ್ನು ತೋರಲು ಮುಂದಾದ ಇಂತಹವರು ನಮ್ಮ ಮುಖ್ಯಮಂತ್ರಿ ಗಳಾಗುತ್ತಿರುವುದು ಕನ್ನಡಿಗರಾದ ನಮ್ಮ ಹೆಮ್ಮೆ ಅಲ್ವೆ ?
ಬಿಜೆಪಿ ಭ್ರಷ್ಟಾಚಾರ ವನ್ನು ಎಂದೂ ಬೆಂಬಲಿಸುವುದಿಲ್ಲ. ವಿಜ್ಞಾನವನ್ನು ಆಶ್ರಯಿಸುತ್ತದೆ . ವಿಜ್ಞಾನ ಕ್ಕೂ ಪೊಲಿಟಿಕಲ್ ಸೈನ್ಸ್ ಗೂ ಇರುವ ಸಂಬಂಧವನ್ನು ಕಂಡು ಬೆರಗುಗೊಂಡಿರುವ,





0 Comments