ಮೊಬೈಲ್ ಗೆ ಬಂದ ಈ ಎಸ್ಎಂಎಸ್

ಇತ್ತೀಚೆಗೆ ನನ್ನ ಮೊಬೈಲ್ ಗೆ ಬಂದ ಈ ಎಸ್ಎಂಎಸ್ ತುಂಬಾ ಇಷ್ಟವಾಯಿತು.

ನಿಮಗೂ ಹಿಡಿಸಬಹುದು ಎಂಬ ಕಾರಣಕ್ಕೆ ಇಲ್ಲಿ ಅದನ್ನು ಯಥಾವತ್ ನೀಡಿದ್ದೇನೆ…
-ಎಂ.ಎಲ್. ಲಕ್ಷ್ಮೀಕಾಂತ್
digging4
ಹಳ್ಳಿಯಲ್ಲಿದ್ದ ಬಡ ರೈತ ಜೈಲಿನಲ್ಲಿರುವ ತನ್ನ ಮಗನಿಗೆ ಒಂದು ಪತ್ರ ಬರೆಯುತ್ತಾನೆ- ಈ ವರ್ಷ ನಾನೂ ಆಲೂಗಡ್ಡೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ನೆಲದ ಗುಳಿ ಹೊಡೆಯಲು ನನ್ನಿಂದ ಆಗುತ್ತಿಲ್ಲ. ಒಂದು ವೇಳೆ ನೀನು ಜೈಲಿನಲ್ಲಿ ಇಲ್ಲದೆ ನನ್ನ ಜತೆ ಇದ್ದರೆ ಆ ಕೆಲಸ ಸುಲಭವಾಗುತ್ತಿತ್ತು.  
ಇದಕ್ಕೆ ಜೈಲಿನಿಂದಲೇ ರೈತನ ಮಗ ಉತ್ತರ ಕೊಡುತ್ತಾನೆ- ದಯವಿಟ್ಟು, ನೆಲ ಅಗೆಯಬೇಡ. ಅದರಲ್ಲಿ ನಾನು ಗನ್ ಗಳನ್ನು ಹೂತಿಟ್ಟಿದ್ದೇನೆ.
ಮರುದಿನವೇ ಪೊಲೀಸರ ದಂಡು ಬಂದು ಆ ಬಡ ಕೃಷಿಕನ ಜಮೀನನ್ನೆಲ್ಲಾ ಅಗೆದು ಬಿಡುತ್ತದೆ. ಗನ್ ಗಳಿಗಾಗಿ ಹುಡುಕಾಡಿ ಬರಿಗೈಲಿ ವಾಪಸಾಗುತ್ತದೆ.
ತಂದೆಗೆ ಮಗ ಮತ್ತೆ ಪತ್ರ ಬರೆಯುತ್ತಾನೆ- ಅಪ್ಪ ಈಗ ನೀನು ಆಲೂಗಡ್ಡೆ ಬೆಳೆಯಬಹುದು. ಜೈಲಿನಲ್ಲಿದ್ದುಕೊಂಡು ನಾನು ಮಾಡಬಹುದಾದ ಸಹಾಯ ಇಷ್ಟೆ!


‍ಲೇಖಕರು avadhi

March 4, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ಬಸವರಾಜು

    ಚೆನ್ನಾಗಿದೆ, ನಮ್ ಹಾಸ್ನುದ್ ರೈತ್ರು ಅಂದ್ರೇನು? ಸುಲ್ಭಾ ಮಾಡ್ಕಬೇಡಿ…

    ಪ್ರತಿಕ್ರಿಯೆ
  2. ಅಂಚೆಮನೆ ರಘು.

    ಲಕ್ಷ್ಮೀಕಾಂತ್ ಅವರಿಗೆ ಬಂದ ಎಸ್ಎಂಎಸ್ ನ ತುಂಬ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: