ಮೊದಲಿನಂತೆ ನಾನಿಲ್ಲ
ನಿಜ ಹುಡುಗ!
ನಾನೀಗ ಹೆಚ್ಚು ಸಮಾಧಾನಿ
ದೂರುಗಳೆದ್ದು, ಮನ ಕೆಂಪಾದಾಗಲೆಲ್ಲ
ನೀನು ಕೆರಳಿಕೆಯೋ, ಕಾರಣವೋ
ಯೋಚಿಸುತ್ತೇನೆ..
ಹೊತ್ತು ಬಂದ ದುಮ್ಮಾನದ ಗಂಟು
ಚಿಲ್ಲರೆಯ ಕೋಪಕ್ಕಿಂತ ಭಾರ
ಬಿಳಿಯ ಕಾಗದದ ಮೇಲೆ
ಮಾಡಿದ ರುಜು ನಿನ್ನೊಬ್ಬನದೇ ಅಲ್ಲ
ಆತ್ಮಕ್ಕಂಟಿದವರೆಲ್ಲ ಕೊಂಚ ಕೊಂಚವೇ
ಬಡಿದು ಮಾಡಿದ ನೆಗ್ಗು, ತಗ್ಗುಗಳಿಗೆ
ಗೊತ್ತಿಲ್ಲದ ನಾಳೆಯ ನೆನಪಾಗಿ
ಮತ್ತೆ ಬಗ್ಗುತ್ತೇನೆ,
ಮಾತು ನುಂಗಿದ ನಿನ್ನ ಮೌನ,
ನನ್ನ ನಿರ್ವಾತಗಳ ಮಧ್ಯೆ
ಸ್ವಗತಗಳ ಶಾಂತಿ ಸಂಧಾನ ನಡೆಯುತ್ತದೆ ಈಗೀಗ..
ದಿನಾ ಹೊಸತೊಂದು ವಾಕ್ಯರಚನೆಗೆ
ವ್ಯಾಕರಣ ಹುಡುಕುವಲ್ಲಿ ತಲ್ಲೀನ ಮನ
ನನಗೆ ಗೊತ್ತು! ನಮ್ಮಿಬ್ಬರ ಭಾಷೆ ಒಂದೇ ಅಲ್ಲ
ಬಂಧಿಸಿರುವುದು
ಎಲ್ಲೋ ಒಳಗೆ ಮಿಡಿಯುವ ಅನುರಾಗದ ತಂತು..
ಭರವಸೆಯ ಬೆಳಕು ಚೆಲ್ಲುವ ನಗು
ನನ್ನ ಮಡಿಲಿಗೆ ನೀನು ಸದ್ದಿಲ್ಲದೆ ಸುರಿವ ಹೂವು,
ಬೆಚ್ಚಗಿನ ನೇವರಿಕೆಗೆ ಹೊತ್ತಿಕೊಳ್ಳುವ ಕಾವು
ದಾರಿಗುಂಟ ನಡೆಯುತ್ತ ಬೆಳೆದಿದ್ದೇವೆ ನಾವು
ನೆತ್ತರ ಬೆವರು ಹರಿಸಿ ಎತ್ತರೆತ್ತರ..
ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ?
ಬೇಕು ಒಪ್ಪಿಗೆ ಇನ್ನೊಮ್ಮೆ..
ಏಕೆಂದರೆ ಹುಡುಗ,
ನಂಟುಗಳು ಚಿರವಲ್ಲ
ಮೊದಲಿನಂತೆ ನಾವಿಲ್ಲ..
Chennagide.
naviraada bhaavaneyuLLa kavana vidya…nice..
ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ? ಬದುಕಿನಭರದಲ್ಲಿ….ಭಾವನೆಗಳು ನಿರ್ಭಾವವಾಗಿ….ವಾಸ್ತವಿಕತೆಯ ಅರಿವು….
ಆಗಬೇಕು…ಜೀವನ…. ಕೇವಲ ಪ್ರೇಮಗೀತೆ ಅಲ್ಲ……
ಮೊದಲಿನಂತೆ ನಾವಿಲ್ಲ..
ಗುರುತಾಯಿತೇ ನಮ್ಮ ಗುರಿಗಳು ಮತ್ತೊಮ್ಮೆ? ಬದುಕಿನಭರದಲ್ಲಿ….ಭಾವನೆಗಳು ನಿರ್ಭಾವವಾಗಿ….ವಾಸ್ತವಿಕತೆಯ ಅರಿವು….
ಆಗಬೇಕು…ಜೀವನ…. ಕೇವಲ ಪ್ರೇಮಗೀತೆ ಅಲ್ಲ……
ಮೊದಲಿನಂತೆ ನಾವಿಲ್ಲ..
Delicate, delicious and fine poetry
ತುಂಬಾ ಇಷ್ಟವಾಯಿತು.
hudugaa nantugalu chirvallla modalinante naavilla…ella hudugaruu artha madikollhabekada saalugalu..