-ಸೂತ್ರಧಾರ ರಾಮಯ್ಯ
ರಾಜ್ಯದ ರಾಜಕಾರಣದ ಶೋಭೆ (show bay) ಒಂದೊಂದು ದಿನ ಒಂದೊಂದು ಮಜ-ಲನ್ನು ತೆರೆಯುತ್ತಿದ್ದು,”ಮಾರ್ ಮಾರ್” ಅಂತ ಶಿವಕು ಮಾರ್, ಕು ಮಾರ್ ಸ್ವಾಮಿ;” ರಪ್ಪಾ ರಪ್ಪಾ” ಅಂತ ಯಡ್ಯೂ ರಪ್ಪಾ ಈಶ್ವ ರಪ್ಪಾ ಒಬ್ಬರ ಮೇಲೊಬ್ಬರು ಬಿಲ್ವಿದ್ಯೆಯನ್ನು ಪ್ರಯೋಗಿಸುತ್ತಾ, ಕ್ಷೋಭಾರಂಜನೆಯನ್ನು ಜನಕ್ಕೆ ನೀಡುತ್ತಿರುವುದರ ಹಿನ್ನೆಲೆಗೆ ಒಂದು ಮಾತು:
ಪ್ರಾರಂಭಕ್ಕೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ಚುನಾವಣೆಯವರೆಗೆ, ಸರ್ವ ರೀತಿಯಲ್ಲೂ ಕ್ಯಾನಡಿಡ್, ಅರ್ಥಾತ್ ನೇರ, ಸರಳ, ನಿಷ್ಕಪಟ ವ್ಯಕ್ತಿಗಳೇ
ಕ್ಯಾನ್ಡಿ ಡೆಟ್ (ಪಾಪ ಸಾಲಸೋಲ ಮಾಡಿಕೊಂಡು) ಆಗಿರ್ತಿದ್ರು. ಆಗ ಅಕ್ಷರಶಃ ನಡೆಯುತ್ತಿತ್ತು ಮತದಾನ. ಮತದಾರರಿಗೆ ಬೆಲೆ ಕೊಡುತ್ತಿದ್ದ ತ್ಯಾಗ ಬುದ್ಧಿಯ ‘ಪ್ರತಿನಿಧಿಗಳ’ ಯುಗ ಸರಿದು, ಜನ + ಕಿಂಚಿತ್ ಧನ ಅನ್ನುವ ಕಾಲ ಬಂತು.ನಂತರ ಬಂದುದೇ ; ಜನ or ಧನವನ್ನು ರೆಡಿಯಾಗಿ ಇಟ್ಟುಕೊಂಡವರ sum ಭವಾಮಿ ಯುಗ. ಇದೀಗ ಜಸ್ಟ್ ‘ಮತ’ಗಳಿಗೆ ‘ಬೆಲೆ’ ಕಟ್ಟುವ ಮತ-ಧನ. ಮುಂದುವರೆದು ಪ್ರತಿ’ನಿಧಿ’ ಗಳಿಗೇ” ‘ಲಾಸ್ಟ್ ರೆಸಾರ್ಟ್’ನ ಬಿಲ್ ಎಷ್ಟು;ನಿನ್ನ ಬೆಲೆಯೆಷ್ಟು?” ಎಂದು ಕೇಳುವ ‘ ಅರ್ಥ’ವನ್ನು’ಸಿದ್ಧ’
ವಾಗಿ ಇಟ್ಟುಕೊಂಡವರ ಬಿಲ್ ವಿದ್ಯಾ ಪ್ರಯೋಗಗಳ ಯುಗ. ಚುನಾವಣಾ ಸಮಯದ ಬಡವರ ಹಿತ ಚಿಂತನೆಯ ಮ್ಯಾನಿಫೆಸ್ಟೋ ಎಲ್ಲಿ? ಪ್ರಸ್ತುತ ಉಳ್ಳವರ ವಿಭವದ ಮ್ಯಾನಿಫೆಸ್ಟೇಶನ್ ಎಲ್ಲಿ ? ಯಾರು ಇದಕ್ಕೆಲ್ಲಾ ಆನ್ಸ-ರೆಬೆಲ್ ಅಂತಾ ಕೇಳುವಂತ ಪರಿಸ್ ತಿಥಿ ಪ್ರಜಾಪ್ರಭುತ್ವಕ್ಕೆ!
ಎಂಡ್ ಗುಟುಕು: ಸಾಮ, ದಾನ, ಬೇಧ ಎಲ್ಲಾ ಫೇಲ್ ಆದ ಮೇಲೆ ‘ದಂಡ’ ಅನ್ನೋದಿದೆಯಲ್ಲಾ ,ಅದು ಫೆನ್ ಟ್ಯಾ-ಸ್ಟಿಕ್!
0 ಪ್ರತಿಕ್ರಿಯೆಗಳು