ಮೆಹೆಂದಳೆ ಅವರ ‘ಕಾಮನಬಿಲ್ಲು’ ಗೆ ಪ್ರಶಸ್ತಿ

ಶ್ರೀ ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಮತ್ತು ಆಕ್ಸ್ಫರ್ಡ್ ಫೌಂಡೆಷನ್ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದ್ದು ಉ.ಕ.ಜಿಲ್ಲೆಯ ಸಂತೋಷಕುಮಾರ ಮೆಹೆಂದಳೆ ಅವರ ʼಕಾಮನ ಬಿಲ್ಲುʼ ಕಥೆ ೧೫ ಸಾವಿರ ರೂ.ಗಳ ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ದಾದಾಪೀರ್ ಜೈಮನ್ ಅವರ ‘ಆವರಣ’ಕತೆ ದ್ವಿತೀಯ ೧೦ ಸಾವಿರ ರೂ. ಮತ್ತು ಡಾ. ನಂದೀಶ್ವರ ದಂಡೆ ಅವರ ‘ಕಾಲದ ಕಟ್ಟಳೆ ಮೀರಬಲ್ಲದೆ’ ಕತೆ ತೃತೀಯ ೫ ಸಾವಿರ ರೂ. ಬಹುಮಾನವನ್ನು ಪಡೆದಿವೆ.

ಡಾ. ಅಮರೇಶ ನುಗಡೋಣಿ ಮತ್ತು ಡಾ. ವಿಠ್ಠಲರಾವ ಗಾಯಕವಾಡ ಈ ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಹಾಗೆಯೇ ಡಾ.ಕೊಳ್ಚಪ್ಪೆ ಗೋವಿಂದ ಭಟ್. ಮುಂಬೈ ಅವರ ಊರಿಗೆ ಬಂದ ಕರಿಬಂಡೆ, ಶೇಖರಗೌಡ ಕೊಪ್ಪಳ ಅವರ ಜನನಿ ಜನ್ಮ ಭೂಮಿಶ್ಚ, ಮಂಜುನಾಥ್ ಮಣಿಪಾಲ ಅವರ ಪಿಣಿಯ ಮತ್ತು ಡೋಲು, ಸುಧಾಕರ ದೇವಾಡಿಗ ಅವರ ಆಳಕ್ಕಿಳಿದ ಬೇರುಗಳು, ಕಾಶೀಮ ಸಾಬ್ ಬೈರಾಪುರ ಅವರ ಕಾರ್ಗತ್ತಲ ಮಾಯೆ ಕತೆಗಳು ತಲಾ ೨೫೦೦ ರೂ. ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಇದರ ಜೊತೆಗೆ ಉತ್ತಮ ಎಂದು ಪರಿಗಣಿಸಲಾದ ಇನ್ನೂ ಎಂಟು ಕತೆಗಳನ್ನು ಸಂಕಲನದಲ್ಲಿ ಬಳಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ಬರುವ ೨೮ ಫೆಬ್ರುವರಿ ರಂದು ಸಿಂಧನೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮತ್ತು ಆಯ್ಕೆಯಾದ ಇತರ ಇಪ್ಪತ್ತು ಕತೆಗಳ ಸಂಕಲನ ಬಿಡುಗಡೆ ಆಗಲಿದೆ ಎಂದು ಪ್ರಧಾನ ಸಂಪಾದಕ ದೇವೆಂದ್ರ ಹೂಡಾ. ಸಿಂಧನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‍ಲೇಖಕರು Avadhi

February 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಿಜಯಾ ಎಸ್. ಪಿ

    ಅಭಿನಂದನೆಗಳು ಮೆಹಂದಳೆಯವರೇ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: