ಭಾನುವಾರ ಅ೦ಕಿತಾ ಪುಸ್ತಕ ಹೊರ ತ೦ದಿರುವ ಜಯ೦ತ ಕಾಯ್ಕಿಣಿಯವರ ಎರಡು ಪುಸ್ತಕಗಳ ಬಿಡುಗಡೆ ಹಾಗೂ ಸಿನಿ ಕವಿ ಸಮ್ಮೇಳನ ನಡೆಯಿತು. ಆ ಸಮಾರ೦ಭದ ದೃಶ್ಯಗಳು. ಫ಼ೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
[gallery columns="4" orderby="ID"]]]>ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಜಯಂತ್ ಕಾಯ್ಕಿಣಿ ಸರ್ ಕತಾಸಂಕಲನ ಹಾಗೂ ಸಿನಿಮಾ ಹಾಡುಗಳ ಪುಸ್ತಕ ಬಿಡುಗಡೆ ಸಮಾರಂಭ ತುಂಬಾ ಒಳ್ಳೆಯ ಅನುಭವ ನೀಡಿತು. ಮೊದಲನೆಯ ಸಂಭ್ರಮ, ಜಯಂತ್ ಸರ್ ಕತೆಗಳನ್ನು ಬರೆದು ಪುಸ್ತಕ ರೂಪದಲ್ಲಿ ತರುತ್ತಿರುವುದು. ಅವರ ಕತೆಗಳ ವಿಸ್ಮಯ ಲೋಕದಲ್ಲಿ ಸಂಭ್ರಮದಿಂದ ಕಳೆದು ಹೋದ ಅದೆಷ್ಟೋ ಅಭಿಮಾನಿ ಓದುಗರಿಗೆ ಅವರ ಹೊಸ ಕತೆಗಳು ಓದಲು ಸಿಗುತ್ತಿರುವುದು ಹೇಳತೀರದ ಸಂತಸದ ವಿಷಯ. ಕನ್ನಡದ ಕತೆಗಳ ಪ್ರಪಂಚದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಬರೆವಣಿಗೆಯ ಮೂಲಕ ಕತಾಸಾಹಿತ್ಯವನ್ನು ಸಮೃದ್ಧ ಗೊಳಿಸಿರುವ ಜಯಂತ್ ಸರ್ ಅವರ ಎಲ್ಲಾ ಕತೆಗಳಲ್ಲೂ ಒಂದು ಅರ್ಥಪೂರ್ಣ ಜೀವನ ದರ್ಶನದ ಅನುಭವವಾಗುತ್ತದೆ. ಅಕಾಡಮಿ ಪ್ರಶಸ್ತಿಗೆ ಪಾತ್ರವಾದ ನಾಲ್ಕು ಕತಾ ಸಂಕಲನಗಳಲ್ಲೂ, (ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ತೆರೆದಷ್ಟೇ ಬಾಗಿಲು, ಬಣ್ಣದ ಕಾಲು), ತೂಫಾನ್ ಮೇಲ್ ಹಾಗೂ ಈಗಿನ ಚಾರ್ ಮಿನಾರ್ ಗಳಲ್ಲಿ ಅವರು ಹೇಳಲು ಹೊರಟ ಕತೆಗಳ ಕತಾನಾಯಕರು ನಮ್ಮ ನಡುವಿನಿಂದಲೇ ಎದ್ದು ಹೋದವರು.
ಅವರ ವಿಶಿಷ್ಟ ರೂಪಕಗಳ ಸೂಕ್ಷ್ಮ ರೀತಿಯ ಬಳಕೆಯ ಮೂಲಕ ಓದುಗನಿಗೆ ವಿಶಿಷ್ಟ ಅನುಭವ ಕೊಡುತ್ತಾ ಸಾಗುವ ಕತೆಗಳು, ಅವುಗಳೊಳಗೆ ಏನೆಲ್ಲಾ ಭಾವವನ್ನು ಕಟ್ಟಿಕೊಂಡಿರುತ್ತವೆಂದು ಓದಿಯೇ ಅನುಭವಿಸಬೇಕು.
ಇಂದ್ರಕುಮಾರ್ ಎಚ್.ಬಿ.
ಸಹ ಶಿಕ್ಷಕ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರ್ಕಿ 577514
ದಾವಣಗೆರೆ ತಾ. ಜಿ.
9986465530
ಭಟ್ಟರು – ಜೋಗಿ ಅವಳಿಗಳ ಥರ ಕಾಣ್ತಾರೆ..!!!:-P