ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಸ್ ಮಾಡ್ಬೇಡಿ 'ಸೈರಾತ್'

shridhar prabhu

ಶ್ರೀಧರ್ ಪ್ರಭು 

ಇದೇ ತಿಂಗಳ ಮೊದಲ ವಾರದಲ್ಲಿ ‘ದಿ ಹಿಂದೂ’ ಪತ್ರಿಕೆಯಲ್ಲಿ ನಾಗರಾಜ ಮಂಜುಳೆಯವರ ಸಂದರ್ಶನದ ಸಹಿತ ಪ್ರಕಟವಾದ ‘ಸೈರಾತ್’ ಚಿತ್ರದ ಕುರಿತ ವಿವರವಾದ ವಿಶ್ಲೇಷಣೆಯುಳ್ಳ ಲೇಖನ ಓದಿದ್ದೆ. ಈ’ಸಂದರ್ಶನದಲ್ಲಿ ಮಂಜುಳೆಯವರು ಹೀಗೆ ಹೇಳಿದ್ದು ಸೀದಾ ಬಂದು ಎದೆಯಲ್ಲಿ ಕುಳಿತಿತ್ತು:
Sairat-movie-review“I am tired of this world created by men, ruined by men. I want a woman now to build the world or mess it up. I also realise that a woman is the Dalit in every case. Even when you look at savarnas [forward castes], the woman is secondary.”
ಆರ್ಚೀಯ ಈ ಕಥೆಯನ್ನು ನೋಡಲು ಬಲು ಉತ್ಸುಕನಾಗಿ ಕಾಯುತ್ತಿದ್ದೆ.

ಪ್ರಿಯ ಮಿತ್ರ Aijoor ಸೈರಾತ್ ಕುರಿತು ಬರೆದ ಮೇಲಂತೂ ಮನಸ್ಸು ಅಪಾರವಾಗಿ ಕಾತರಿಸಿ ಕುಳಿತಿತ್ತು.
ಚಿತ್ರವನ್ನು ನೋಡಿ ಸಂಪೂರ್ಣವಾಗಿ ಕಂಪಿಸಿ ಹೋಗಿದ್ದೇನೆ! ಇಷ್ಟೊಂದು ಗಾಢವಾಗಿ ಸ್ಪರ್ಶಿಸಿದ ಇನ್ನೊಂದು ಪಟ ನೋಡಿದ್ದು ಸಧ್ಯದಲ್ಲಿ ನೆನಪಾಗುತ್ತಿಲ್ಲ!!
ಇದರಿಂದ ಹೊರಗೆ ಬಂದು ಸಾವರಿಸಿಕೊಳ್ಳಲು ಕೆಲವು ವಾರಗಳಾದರೂ ಖಂಡಿತಾ ಬೇಕು. ಚಿತ್ರದ ಅಂತ್ಯವನ್ನು ನೋಡಿ ಹೃದಯ, ಮನಸ್ಸು, ಮೆದುಳು ಎಲ್ಲವೂ ಒಂದು ರೀತಿ ಸ್ಥಬ್ಧವಾಗಿ ಹೋಗಿವೆ!
ಹೆಚ್ಚೇನೂ ಬರೆಯಲು ಸಾಧ್ಯವೇ ಆಗುತ್ತಿಲ್ಲ. ಕ್ಷಮಿಸಿ.
ಯಾವ ಕಾರಣಕ್ಕೂಈ ಚಿತ್ರ ನೋಡುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ…ಪ್ಲೀಸ್!
sairatteam team

‍ಲೇಖಕರು Avadhi

27 May, 2016

1 Comment

  1. Dr.Sulekha Varadaraj

    thanks for the information

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading