ಮಾರುವೇಷ

ಪ್ರೊ. ಚಂದ್ರಶೇಖರ ಹೆಗಡೆ

ಪಾತಾಳದಿಂದೆದ್ದು ಭೋಂಕನೆ
ಬೇಟೆಯಾಡುವ ವಿಧಿಯೇ
ಶ್ವಾನದಲ್ಲಡಗಿ ಹೊಟ್ಟೆ ಹೊರೆವ
ಹಂಗಿನರಮನೆಯ ವಾಸವೇಕೆ?
ವಾಹನದೊಳಗಿಳಿದು ಬಲಿ ಬೇಡುವ
ಭಿಕ್ಷಾಟನೆಯ ಡಾಂಭಿಕತೆಯೇಕೆ?
ಹೃದಯದೊಳಪೊಕ್ಕು ನಿಲ್ಲಿಸುವ
ಮೋಸದ ಮಾರುವೇಷವೇಕೆ?

ಹೊರಬಂದು ಎದುರಾಗಿಬಿಡು ಒಮ್ಮೆ
ನಿಜರೂಪ ಸತ್ಯ ನಾಮವ ತಳೆದು
ಕಣ್ತುಂಬಿಕೊಳ್ಳಲಿ ಜಗವು ಮೊರೆದು
ಪ್ರಾರ್ಥಿಸಿ 
ದಣಿವಿಲ್ಲದ ಕಾಯಕಕೆ ಶರಣು
ಶರಣೆಂದೆನುತ!
ಎದೆಯೊಳಗಿನ ದಯೆ ಕರುಣೆಗಳ
ಹುಡುಕಿ ಕೊರಗುತ

ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು?
ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು?
ಬಿಡುವ ಬಾಣದ ತುದಿಗೆ
ಎಂದೂ ನೀಗದ ಹಸಿವಿನೊಡಲು
ಎಲ್ಲಿ ಬರಿದಾಗುವುದೋ ಇಂದು
ಯಾವ ತಾಯಿಯ ಮಡಿಲು

ಪಯಣ ಹೊರಟವರ ಮನದಲ್ಲೊಂದು
ನಿತ್ಯ ಅಳುಕು
ಯಾರಿಗೆ ಗೊತ್ತು ನಿನ್ನೊಳಗಿನ
ವಂಚನೆಯ ಹುಳುಕು
ಕಾಣದ ಲೋಕದೊಳಗೇಕೆ ಬಯಲಾಟ
ತೊರೆದುಬಿಡಬಾರದೇ ಹೇಗಾದರೂ
ಕೊಂಡೊಯ್ಯುವೆನೆಂಬ ಹಠ

ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನ
ಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆ
ನಿನ್ನದೇ ಅಟ್ಟಹಾಸದ ವದನ
ಲೋಕವೆಲ್ಲವೂ ವಿರೋಧಿ ಬಣ
ಹೀಗಳೆಯಬಾರದೆಂದರೂ ನಿನ್ನ
ಬಿಡದು ಹೆಣೆದ ಚಕ್ರವ್ಯೂಹದ ದರ್ಶನ

‍ಲೇಖಕರು Avadhi

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: