ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮಕ್ಕೆ ಒಂದು ತೋರುಬೆರಳು- ಬನ್ನಿ

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ

ಮಕ್ಕಳು, ಗ್ರಾಮೀಣ, ಬುಡಕಟ್ಟು ಭಾಷೆ, ಸಂಸ್ಕೃತಿ-ಸಾಹಿತ್ಯ ಅಭಿವೃದ್ಧಿ ಸಂಸ್ಥೆ

# 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560 104

ದೂರವಾಣಿ: 080-23409512, 9448102158

byregowda.m1@gmail.com

we_media

ಆತ್ಮೀಯರೆ,

ಸ್ವಾತಂತ್ರ್ಯಾನಂತರ ನಾವು ಆಯ್ಕೆ ಮಾಡಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಪೂರಕವಾದ ಅನೇಕ ಸಂಸ್ಥೆಗಳನ್ನು ಬೆಳೆಸಿದೆವು. ಉದಾಹರಣೆಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೆಯೇ ಉದಾರ ಪ್ರಜಾಪ್ರಭುತ್ವದ ಎಚ್ಚರದ ಗಂಟೆಯಂತೆ ಉಳಿದೆಲ್ಲ ಅಂಗಗಳನ್ನು ಕಾಯುವ ಕೆಲಸಕ್ಕೆಂದು ಸ್ವತಂತ್ರ ಮಾಧ್ಯಮ ವ್ಯವಸ್ಥೆಯನ್ನೂ ಪೋಷಿಸಿಕೊಂಡು ಬಂದೆವು. ಆದರೆ 60 ವರ್ಷಗಳ ಸ್ವತಂತ್ರ ಭಾರತದಲ್ಲಿ ಅವು ಒಂದೊಂದಾಗಿ ಜನರ ನಂಬುಗೆಯನ್ನು ಹುಸಿಮಾಡಿದವು. ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಅಂಗವೆನಿಸಿದ ನ್ಯಾಯಾಂಗದಲ್ಲಿ ನಡೆದಿರುವ ಅವಾಂತರಗಳ ಬಗ್ಗೆ `ಫ್ರಂಟ್ ಲೈನ್’ ನಿಯತಕಾಲಿಕದಲ್ಲಿ ಎ.ಜಿ. ನೂರಾನಿಯವರು ಬರೆದಿರುವ ಎರಡು ಲೇಖನಗಳನ್ನು ಓದಿದರೆ ನಾವು ಕಾನೂನು ಕಟ್ಟಲೆಯ ಮಿತಿಯ ನಾಗರೀಕ ಸಮಾಜದಲ್ಲಿದ್ದೇವೆಯೊ ಅಥವಾ ಕಾಡಿನ ರಾಜ್ಯದಲ್ಲಿದ್ದೇವೆಯೊ ಎನ್ನುವ ಭಯ ಕಾಡಲಾರಂಭಿಸುತ್ತದೆ.

ಪ್ರಜಾಪ್ರಭುತ್ವದ ಒಂದೊಂದೇ ಸ್ಥಂಭಗಳು ಕುಸಿಯುತ್ತಿರುವ ಈ ಕಾಲದಲ್ಲಿ ಮಾಧ್ಯಮಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಂತಿಲ್ಲ. ಅವೂ ಕೂಡ ಇತರ ಸಂಸ್ಥೆಗಳ ಪ್ರತಿಬಿಂಬದಂತೆ ಸಾಮಾಜಿಕ ಜವಾಬ್ದಾರಿಯನ್ನಾಗಲಿ ಅಥವಾ ಜನಪರ ನಿಲುವುಗಳನ್ನಾಗಲಿ ತೆಗೆದುಕೊಂಡು ಕಾರ್ಯನಿರ್ವಹಿಸುವುದು ಬರೀ ಮಾಧ್ಯಮ ಪಠ್ಯಪುಸ್ತಕಗಳಿಗಷ್ಡೇ ಸೀಮಿತವಾಗಿಹೋಗಿದೆ.

1991ರ ನಂತರ ಗೋಳೀಕರಣದಲ್ಲಿ ಮಾಧ್ಯಮಗಳ ಬೆಳವಣಿಗೆ ಹುಲುಸಾಗಿದೆ. ಆದರೆ ಅದರಿಂದ ಸಮಾಜಕ್ಕೇನೂ ಲಾಭವಾಗಿಲ್ಲ. ಬೇಜವಬ್ದಾರಿ ವರದಿ, ಬರವಣಿಗೆ, ಹಣ ಮಾಡುವುದಷ್ಟೇ ಮುಖ್ಯವಾದ ಮಾಧ್ಯಮ ತಂತ್ರಗಳನ್ನು ಬಳಸುತ್ತ ಅವು ಕೆಲವು ಶ್ರೀಮಂತರ ಮತ್ತು ಅವರ ಹಿತಾಸಕ್ತಿಗಳ ವಕ್ತಾರರಂತೆ ವರ್ತಿಸಲಾರಂಭಿಸಿವೆ. ಜನರಿಂದ ದಿನೇ ದಿನೇ ದೂರವಾಗಲಾರಂಭಿಸಿವೆ. ಲಾಭಗಳಿಕೆ ಮತ್ತು ಹುಚ್ಚು ಪೈಪೋಟಿಯಲ್ಲಿ ಅವು ತಾವು ಸಂವಿಧಾನಾತ್ಮಕವಾಗಿ ಪಡೆದ ಹಕ್ಕುಗಳ ದುರುಪಯೋಗಕ್ಕೆ ಇಳಿದಿವೆ. ಹಕ್ಕು ಮತ್ತು ಜವಾಬ್ದಾರಿ ಎರಡೂ ಒಟ್ಟೊಟ್ಟಿಗೆ ಹೋಗದಿದ್ದರೆ ಎಂತಹ ಅಪಾಯಗಳನ್ನು ನಾವು ಎದುರಿಸುತ್ತೇವೆ ಎನ್ನುವುದು ನಮ್ಮ ಅರಿವಿಗೆ ಬರಲಾರಂಭಿಸಿದೆ.

ಈಗ ನಮ್ಮ ಮುಂದಿರುವ ಸವಾಲೆಂದರೆ ಸಮಗ್ರ ರಾಜಕೀಯ ವ್ಯವಸ್ಥೆಯ ಸುಧಾರಣೆಯಂತೆಯೇ ಭಾರತೀಯ ಮಾಧ್ಯಮದ ಸುಧಾರಣೆಗೆ ಮುಂದಾಗಬೇಕಾಗಿದೆ. ಇಲ್ಲ, ಈಗಿರುವ ಮಾಧ್ಯಮ ವ್ಯವಸ್ಥೆಗೆ ಪರ್ಯಾಯವಾದ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಇದು ತಡವಾದಷ್ಟೂ ಅಪಾಯ ಹೆಚ್ಚಾದುದರಿಂದ ಜರೂರಾಗಿ ಈ ಕಾರ್ಯದತ್ತ ಗಮನಹರಿಸಬೇಕಾಗಿದೆ. ಮೂರೂ ದಿನಗಳ ನಮ್ಮ ಕಾರ್ಯಾಗಾರದ ಉದ್ದಿಶ್ಯಗಳಾದರೂ ಇಷ್ಟೇ. ನಾಡಿನ ಪ್ರಜ್ಞಾವಂತರಾದ ನಿಮ್ಮ ಮುಕ್ತ ಸಲಹೆ ಸಹಕಾರಕ್ಕಾಗಿ ಎದುರು ನೋಡುತ್ತಿದ್ದೇವೆ.

1. ಮಿಥ್ ಗಳನ್ನು ಬ್ರೇಕ್ ಮಾಡುವುದು

2. ಸಂಕುಚಿತಗೊಳ್ಳುತ್ತಿರುವ ಸಾರ್ವಜನಿಕ ಸಂವಾದ

3. ಪರ್ಯಾಯಗಳ ಹುಡುಕಾಟ

ಶಿಬಿರಾರ್ಥಿಗಳಿಗೆ-

1. ಊಟ, ವಸತಿ ವ್ಯವಸ್ಥೆ ಮಾಡಲಾಗುವುದು.

2. ಸಾಮಾನ್ಯ ದರದ ಪ್ರಯಾಣ ಭತ್ಯೆ ನೀಡಲಾಗುವುದು.

3. ಮೂರು ದಿನಗಳು ಕಡ್ಡಾಯವಾಗಿ ಉಳಿಯಬೇಕು. ಒಒಡಿ ಸೌಲಭ್ಯ ಬಳಸಿಕೊಳ್ಳಬಹುದು.

4. ಮೇಲಿನ ವಿಷಯಗಳ ಬಗೆಗೆ ನಡೆದಿರುವ ಚರ್ಚೆಗಳನ್ನು ಅವಲೋಕಿಸಿಕೊಂಡು ಬಂದರೆ ಚರ್ಚೆಗೆ ಅನುಕೂಲ.

5. 28 ನವೆಂಬರ್ 2008ರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕನಕಪುರ ಬಸ್ ನಿಲ್ದಾಣಕ್ಕೆ ಬಂದರೆ ತಮ್ಮನ್ನು ಕಾರ್ಯಾಗಾರ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆಯಿದೆ.

-ಎಂ ಭೈರೇಗೌಡ

ಕಾರ್ಯದರ್ಶಿ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ

‍ಲೇಖಕರು avadhi

23 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading