ಬಿ ಸುರೇಶ ಅವರ ‘ಮಲ್ಟಿಪ್ಲೆಕ್ಸ್ ಸಂಸ್ಕೃತಿ’ಗೆ ಬಂದ ಪ್ರತಿಕ್ರಿಯೆಗಳಿಗೆ ಬಿ ಸುರೇಶ್ ಅವರೇ ಉತ್ತರಿಸಿದ್ದಾರೆ – ಥ್ಯಾಂಕ್ಸ್ ಕಣಮ್ಮ ಸುರೇಶ್

ಸುಪ್ರೀತ್ ಅವರ ಪ್ರತಿಕ್ರಿಯೆಗೆ
ಗೆಳೆಯರು ಹೇಳುತ್ತಾ ಇರುವುದು ಸರಿ. ಈ ಲೇಖನದಲ್ಲಿ ಎಲ್ಲವೂ ಚರ್ಚಿತವಾಗಿಲ್ಲ. ಚರ್ಚಿತವಾಗಬಹುದಾದ ಅನೇಕ ವಿಷಯಗಳಿವೆ. ಪ್ರಾಯಶಃ ಈಗ ಇರು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಇಡೀ ವಿವರವನ್ನ ಮರುಪರಿಶೀಲಿಸಬಹುದು.
ಆದರೆ ಎರಡನೆಯ ಅರ್ಧದಲ್ಲಿ ನೂವು ಕೇಳುತ್ತಾ ಇರುವ ಪ್ರಶ್ನೆಗಳಿಗೆ ಬಹುತೇಕ ಉತ್ತರಗಳು ಲೇಖನದಲ್ಲಿ ಸಿಗುತ್ತವೆ.
ಮಲ್ಟಿಪ್ಲೆಕ್ಸ್ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ. ತಲೆಗೆ ಐನೂರು ರೂ.ಕೊಟ್ಟು ಸೌಲಭ್ಯ ಕೊಳ್ಳುವವರು ಎಂತಹವರು ಎಂದು ಬಿಡಿಸಿ ಹೇಳಬೇಕೆ?
ನನ್ನ ಲೇಖನದಿಂದ ನಿಮ್ಮ ತಲೆಯಲ್ಲಿ ಒಂದು ಹುಳು ಮಾತ್ರ ಬಿಟ್ಟಿದ್ದೇನೆ. ಅದು ಏನೇನು ಮಾಡುತ್ತದೋ ನೋಡೋಣ, ನನಗೂ-ನಿಮಗೂ…
ಒಳಿತಾಗಲಿ, ಸುಪ್ರೀತ್
ಸಂದೀಪ್ ನಾಯಕ್ ಅವರ ಪ್ರತಿಕ್ರಿಯೆಗೆ
ಕಾಸು ಗಿಟ್ಟತ್ತೆ ಅಂತ ಅವರು ನೀಲಿ ಚಿತ್ರ ಹಾಕ್ತಾ ಇಲ್ಲ. ಅವರು ಸಮಾಜಸೇವೆ ಹೆಸರಲ್ಲಿ ಮಾಡ್ತಾ ಇರುವ ವ್ಯಾಪಾರವನ್ನ ಗಮನಿಸಬೇಕು, ಗೆಳೆಯರೇ…
ಅದೇ ಇಲ್ಲಿ ದೊಡ್ಡ ಪ್ರಶ್ನೆ.
ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ಅದಕ್ಕೆ ಇರುವ ಜವಾಬ್ದಾರಿಗಳು ಬಹಳ ದೊಡ್ಡದು ಅಲ್ವಾ?
ಮೊದಲು ನಮ್ಮ ರಸ್ತೆಯಲ್ಲೇ ಇದ್ದ ದಿನಸಿ ಅಂಗಡಿಯಲ್ಲಿ ನಾವು ಚೌಕಾಸಿ ಮಾಡುತ್ತಿದ್ದೆವು. ಈಗ ಮಾಲ್ನಲ್ಲಿ ಚೌಕಾಸಿಗೆ ಅವಕಾಶವಿಲ್ಲ.
ಹಾಗೆಯೇ ಚಿತ್ರಮಂದಿರದ ವಿವರವನ್ನ ಗಮನಿಸಬೇಕು.
ಇದು ಆರ್ಥಿಕ ನೆಲೆಯಿಂದ, ಸಾಮಾಜಿಕ ನೆಲೆಯಿಂದ ಚರ್ಚಿತವಾಗಬೇಕಾದ ವಿಷಯ.
ಒಮ್ಮೆ ಜೋಸೆಫ್ ಸ್ಟಿಗ್ಲಿಟ್ಸ್ನ ಓದಿ.
ಶುಭದಾ ಅವರ ಪ್ರತಿಕ್ರಿಯೆಗೆ
ಥ್ಯಾಂಕ್ಸ್! ನಾನು ಕನ್ನಡವನ್ನೂ ರಾಷ್ಟ್ರಭಾಷೆ ಎನ್ನುತ್ತೇನೆ. ಅದು ನನ್ನ ಖುಷಿಗೆ.
ಅಥವಾ ಕನ್ನಡಾಭಿಮಾನಿಗಳ ಖುಷಿಗೆ. ಅದು ರಾಷ್ಟ್ರೀಯ ಸತ್ಯವಲ್ಲ ಎಂಬುದು ನಿಮಗೂ ಗೊತ್ತು, ನನಗೂ ಗೊತ್ತು.
ಹಿಂದಿಯನ್ನ ಹೇರಲಾಗಿದೆ. ಅದರ ಸಂಕಷ್ಟವನ್ನ ಪ್ರತಿಭಾರೀ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನುಭವಿಸುತ್ತಾ ಇದ್ದೇವೆ.
ಇದರಿಂದ ಬಿಡಿಸಿಕೊಳ್ಳಲು ಹೋರಾಟವಾಗುತ್ತಿದೆ. ಗೆಲುವು ಸಿಗಬೇಕಿದೆಯಷ್ಟೆ.
ಪ್ರತಿಕ್ರಿಯೆಗೆ ವಂದನೆಗಳು.
ಬಿ.ಸುರೇಶ
ಮಲ್ಟಿಪ್ಲೆಕ್ಸ್ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು?
ನಿಮಗೆ ಇವೂ ಇಷ್ಟವಾಗಬಹುದು…





ಸುರೇಶ್ ರವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,(ಆದ್ರೆ ನಾನು ಸಂದೀಪ್ ನಾಯಕ್ ಅಲ್ಲ ಕಾಮತ್!)
“ಸಿನಿಮಾ ಕೇವಲ ಮಾರಾಟದ ಸರಕಾಗಬಾರದು ಅಲ್ವಾ? ” ಅಂತ ಕೇಳಿದ್ರಿ.
ನೀವು ನನ್ನನ್ನು ಕೇಳಿದ್ದಾ?? ನನ್ನನ್ನು ಕೇಳಿದ್ರೆ ’ಖಂಡಿತ ಮಾರಾಟದ ಸರಕಾಗಬಾರದು ’ ಅಂತೀನಿ.
ಆದ್ರೆ ಸಿನೆಮಾ ರಂಗದಲ್ಲಿರೊ 90% ಜನ ಹಣ ,ಹೆಸರು ಮಾಡಲು ಇರೋದು ಅಲ್ವಾ ಸರ್ ? ಉಳಿದ 10 % ಜನರು ಏನೇ ಸದಭಿರುಚಿಯ ಸಿನೆಮಾ ಕೊಟ್ರೂ ದಿನದ ಕೊನೆಗೆ ಹಣ ಎಣಿಸಿಲ್ಲ ಅಂದ್ರೆ ಬದುಕೋದು ಹೆಂಗೆ ಸರ್??
ನಿಮ್ಮ ಲೇಖನದ ಉದ್ದೇಶ ತುಂಬಾ ಚೆನ್ನಾಗಿದೆ .ಆದರೆ ಉದ್ದೇಶ ಏನೇ ಇದ್ರೂ ಪ್ರ್ಯಾಕ್ಟಿಕಲ್ ಆಗಿಲ್ಲದಿದ್ರೆ ಏನು ಸಾಧಿಸಿದ ಹಾಗಾಗುತ್ತೆ?
ಫುಟ್ಪಾತಿನಲ್ಲಿ ಎಷ್ಟೆ ಒಳ್ಳೆಯ ಚಿತ್ರಾನ್ನ ಸಿಕಿದ್ರೂ ನಾವ್ಯಾಕೆ ಅಡಿಗಾಸ್ ಗೆ ಹೋಗ್ತೀವಿ.
ದುಡ್ಡಿನ ಮದವುಳ್ಳವರಷ್ಟೆ ಮಲ್ಟಿಪ್ಲೆಕ್ಸ್ ಗೆ ಹೋಗ್ತಾರೆ ಅನ್ನೋ ಜನ ಯಾಕೆ ಚಿಕ್ಕ ಪುಟ್ಟ ಹೋಟೆಲ್ ಗೆ ಹೋಗಲ್ಲ?
ಐಟಿ-ಬಿಟಿ ಸಂಸ್ಕೃತಿ ,ಮಲ್ಟಿಪ್ಲೆಕ್ಸ್ ಸಂಸ್ಕೃತಿ ಅಂತ ಜನರಲೈಸ್ ಮಾಡೊದು ನನ್ಗೆ ಅಷ್ಟು ಸರಿ ಅನ್ನಿಸ್ಲಿಲ್ಲ ಅಷ್ಟೆ.
ನಾಗ್ತಿಹಳ್ಳಿ ’ಮಾತಾಡ್ ಮಾತಾಡು ಅಂತ ಎಷ್ಟೆ ಒಳ್ಳೆ ಸಿನೆಮಾ ಮಾಡಲಿ ,ದಿನದ ಕೊನೆಗೆ ಸಿನೆಮಾ ನೋಡೊದಿಕ್ಕೆ ಒಳ್ಳೆಯ ಮಲ್ಟಿಪ್ಲೆಕ್ಸ್ ಗೆ ತಾನೆ ಹೋಗೋದು?
ಇಲ್ಲಾಂದ್ರೆ ಮಲ್ಲೇಶ್ವರಂ ರೀಜಯ್ಸ್ ನಂಥ ಒಳ್ಳೆಯ ಜಾಗದಲ್ಲಿ ತಾನೇ ಸಿನೆಮಾ ಪ್ರೀಮಿಯರ್ ಏರ್ಪಡಿಸೋದು?ಪಾನ್ ಪರಾಗ್ ಘಾಟ್ ಬರೋ ಮೆಜೆಶಸ್ಟಿಕ್ ನ ಥಿಯೇಟರ್ ಗಳಿಗೆ ಯಾರೂ ತಲೇನೂ ಹಾಕಲ್ಲ.
ಮತ್ತಿಕೆರೆಯಲ್ಲೊಂದು ಟೆಂಟ್ ಸಿನೆಮಾಗೃಹ ಇದೆ ಲಕ್ಷ್ಮಿ ಅಂತ.ಪಕ್ಕಾ ಒರಿಜಿನಲ್ ಟೆಂಟ್ ! ಇಲ್ಲಿ ನಾನು ಎರಡು ಮೂರು ಸಿನೆಮಾ ನೋಡಿದ್ದೇನೆ.ಕೊನೆಗೆ ಒಂದು ಜಗಲಿ ಇದೆ ಆ ಜಗಲಿಯ ಮೇಲೆ ಕೂತು.ಆದ್ರೆ ನಮ್ಮ ಜನರು ಆ ಟೆಂಟ್ ಕಡೆ ತಲೆನೂ ಹಾಕಲ್ಲ.
ಸೀದಾ ಬಿಡದಿಯ ಫಿಲಂ ಸಿಟಿಗೆ ಹೋಗಿ ಟೆಂಟ್ ಸಿನೆಮಾ ನೋಡ್ತಾರೆ!
ನಿಮಗೆ ಗೊತ್ತಿರೋ ಥರ ಸಿನೆಮಾ ಒಂದು ಜೂಜು.ಅದರಲ್ಲಿ ಎಷ್ಟೆ ಎಕ್ಸ್ಪರಿಮೇಂಟ್ ಮಾಡ್ಬೇಕಿದ್ರೂ ಕೊನೆಗೆ ಧೈರ್ಯ ಮಾಡ್ಬೇಕಾಗಿರೋದು ದುಡ್ಡಿರೋ ಪ್ರೊಡ್ಯೂಸರ್ ಅಲ್ವ?
ನಿಮ್ಮ ಕಾಳಜಿ ಎಲ್ಲರಿಗೂ ಬಂದ್ರೆ ಚೆನ್ನಾಗಿರ್ತಿತ್ತು.ಆದ್ರೆ ಎಲ್ಲಾ ದುಡ್ಡಿನ ಸುತ್ತಲೇ ಗಿರಕಿ ಹೋಡೆಯೋ ಈ ದಿನಗಳಲ್ಲಿ ಇದು ಕಷ್ಟ!!
ಒಂದು ಮಾತು ಮರೆತೆ ಹೋಗಿತ್ತು!
ನಾನು ಮಲ್ಟಿಪ್ಲೆಕ್ಸ್ ಗೂ ಹೋಗಿದ್ದೀನಿ ಹಾಗೆ ಮತ್ತಿಕೆರೆಯ ಟೆಂಟ್ ನಲ್ಲಿ ಕುಳಿತು ಸಿನೆಮಾ ನೋಡಿದ್ದೀನಿ.
“ಮಲ್ಟಿಪ್ಲೆಕ್ಸ್ನ ಆರಿಸಿಕೊಳ್ಳುವವರ ಮನಸ್ಸು ಎಂತಹದು, ಮತ್ತು ಮಲ್ಟಿಪ್ಲೆಕ್ಸ್ಗಳನ್ನ ನಿರ್ಮಿಸುವವರ ಮನಸ್ಸು ಎಂತಹುದು ಎಂಬುದು ಅದಾಗಲೇ ಪ್ರಮಾಣೀಕೃತ ಸತ್ಯ” ಅಂತ ನೀವು ಹೇಳಿದ್ದು ಸ್ವಲ್ಪ ಬೇಸರ ತರಿಸಿತು:(
ಗಿರೀಶ್ ಕಾಸರವಳ್ಳಿಯವರ ’ಗುಲಾಬಿ ಟಾಕೀಸ್’ ಕೂಡಾ ಬಿಡುಗಡೆಯಾಗಿದ್ದು ಪಿವಿ ಆರ್ ಮಲ್ಟಿಪ್ಲೆಕ್ಸ್ ನಲ್ಲೇ! ಹಾಗಿದ್ರೆ ಗಿರೀಶ್ ಕಾಸರವಳ್ಳಿ ಕೂಡಾ ಮಲ್ಟಿಪ್ಲೆಕ್ಸ್ ಮನಸ್ಥಿತಿಯವರಾ??
’ಗುಲಾಬಿ ಟಾಕೀಸ್’ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆ ಆಗೋದಿಕ್ಕೆ ’ಅದರದ್ದೇ ’ ಆದ ಕಾರಣಗಳಿತ್ತು ಅಂತ ನೀವು ಹೇಳಬಹುದು .ಆದರೆ ಮಲ್ಟಿಪ್ಲೆಕ್ಸ್ ಗಳಿಗೆ ’ಅವರದ್ದೇ ’ ಆದ ಕಾರಣಗಳಿಂದ (ಪಾನ್ ಪರಾಗ್ ಘಾಟು!) ಹೋಗೋರು ಇದ್ದಾರಲ್ಲ ಸರ್ .ಅವರ ಮನಸ್ಥಿತಿಯ ಬಗ್ಗೆ ಆಪಾದಿಸೋದು ಸರಿ ನಾ??