ಮರಣದ ಬಾಗಿಲಲ್ಲಿ..

ಜಿ ಪಿ ಬಸವರಾಜು

ದೇವ ಭಾಗ
ಕೊಡಬೇಕು ದೇವತೆಯೆ-
ಮೃತ್ಯು ದೇವತೆಯೇ
ನಿನ್ನ ಪಾಲನ್ನು ನಿನಗೆ
ಅದು ಸಹಜ, ನ್ಯಾಯ
ಆದರೆ
ಹೀಗಲ್ಲ:
ಏಕಾಏಕಿ ಮಾರಿ-
ಬಲೆ ಬೀಸಿ
ಸಾರಾಸಗಟು ಜೀವಗಳ
ಎಳೆದೊಯ್ಯುವುದಲ್ಲ

ಹುಡುಗು ಹರಯ ಮುದಿತನಗಳ
ಗೆರೆಯನ್ನು ಅಳಿಸಿ
ಉಳಿಸದೆ ಏನನ್ನೂ
ಸೆಳೆಯುವುದೆಷ್ಟು
ಸಹಜ, ನ್ಯಾಯ?

ನೀನು ಹೊರತಲ್ಲ
ಲೋಕ ನಿಯತಿಗೆ
ಋತ ಗತಿಗೆ;

ನಿಫಾ, ಕೊರೊನಾ, ಎಬೋಲ
ಹೆಸರೇನಾದರೇನು?
ಪರಿಣಾಮ, ಪದ
ನೀನೇ;

ನಿಂತು, ಧ್ಯಾನಿಸಿ
ನೋಡು: ನ್ಯಾಯದ
ತಕ್ಕಡಿ ತೂಗುವುದನ್ನು

ಕರುಳೆಂಬುದು
ನಿನಗೂ ಇದ್ದರೆ
ನಡೆದುಕೊ ತಕ್ಕಂತೆ

ಮರಣದ ಬಾಗಿಲಲ್ಲಿ
ತಲೆಬಾಗಿದ ಬಲಿ ನಾವು
ಕಾದು ನಿಂತಿದ್ದೇವೆ
ಕರುಣೆಯ ಕಣ್ಣಿಗಾಗಿ
ಕೇಳುತ್ತೇವೆ ಕೊನೆಯ
ಬಾರಿ: ನೋಡು ಇನ್ನೊಮ್ಮೆ
ನಿನ್ನ ಪಾಲು ಸರಿಯಿದೆಯೇ?

‍ಲೇಖಕರು avadhi

March 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸಿರಾಜ್ ಅಹಮದ್

    ಕರುಣೆಯ ಕಣ್ಣಿಗಾಗಿ
    ಕೇಳುತ್ತೇವೆ ಕೊನೆಯ
    ಬಾರಿ: ನೋಡು ಇನ್ನೊಮ್ಮೆ
    ನಿನ್ನ ಪಾಲು ಸರಿಯಿದೆಯೇ?
    …… ಏನೂ ಹೇಳಲು ಆಗುತ್ತಿಲ್ಲ. ಈ ಸಾಲುಗಳು ಹೇಳುವ ಹಾಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: