ಮನಗೆದ್ದ ಪಾರ್ಥನ ಸರದಿಗೆ ಕಾಯಬೇಕು ಇನ್ನೆರಡು ವರ್ಷ..

ದ್ರೌಪದಿಯ ಸ್ವಗತ..?

-ಡಾ.ಶಿವಾನಂದ ಕುಬಸದ


“ಐದೂ ಜನ ಹಂಚಿಕೊಳ್ಳಿರಿ…”
ಅರ್ಥವಿಲ್ಲದ ಅಪ್ರಯತ್ನ ಮಾತಿಗೆ
ಕ್ಷಣಮಾತ್ರದಲ್ಲಿ ಹಂಚಿಹೋಗಿಬಿಟ್ಟೆ
ಅರಸ ಗೆದ್ದು ತಂದ ನಿರ್ಜೀವ ಸೊತ್ತಿನ ಹಾಗೆ…
 
ರಾಜಮಾತೆ ಕುಂತಿ ಅವಳ ಅತಿರಥ
ಮಹಾರಥ ಧರ್ಮದುರಂಧರ ಪುತ್ರರು
ಯೋಚಿಸಲಿಲ್ಲೊಂದರಘಳಿಗೆ
ನನ್ನ ಮನದಲ್ಲೇನಿರಬಹುದೆಂದು
 
ಮೊದಲ ವರ್ಷ ಧರ್ಮನ ಮಹಿಷಿ
ಮುಂದೆ ವರ್ಷಕ್ಕೊಬ್ಬನ ಮಡದಿ
ಮೈಯ ಹಂಚಿಕೊಳ್ಳಬಹುದು ಒಂದಿಷ್ಟು
ಕಷ್ಟಪಟ್ಟು, ಆದರೆ ಮನಸ್ಸನ್ನು…?
 
ಯಜ್ಞಾಗ್ನಿಯಿಂದ ಉದ್ಭವಿಸಿದವಳ
ಸಮಾಧಾನಿಸಲು ಪತಿವ್ರತೆಯ ಪಟ್ಟ
ಮನಗೆದ್ದ ಪಾರ್ಥನ ಸರದಿಗೆ
ಕಾಯಬೇಕು ಇನ್ನೆರಡು ವರ್ಷ
 
ಬಿಲ್ಲಿಗೆ ಹೆದೆಯೇರಿಸಿ ತಿರುಗು ಮೀನಿನ
ಕಣ್ಣಿಗೆ ಗುರಿಯಿಟ್ಟವಗೆ ಹೇಗೆ ಅರ್ಥವಾಗಬೇಕು
ಹೆಣ್ಣು ಮನಸಿನ ಬಯಕೆಯೇನೆಂದು
ಒಂದೇ ಮಾತಿಗೆ ಹ್ಞೂಂಗುಟ್ಟಿಬಿಟ್ಟ
ಗೆದ್ದು ತಂದವಳನ್ನು ಹಂಚಿಕೊಳ್ಳಲು
 
ಇಂದ್ರಪ್ರಸ್ಥದಲಿ ನನ್ನ ಬಿಸಾಕಿ ಅತ್ತ
ತೀರ್ಥಯಾತ್ರೆಯ ನೆಪದಲಿ ಹೊರಟೇ ಬಿಟ್ಟ
ತಿರುಗಿ ಬಂದಾಗ ಮತ್ತೆ ಮೂರು
ಹೆಣ್ಣುಗಳ ಪಡೆದು ಸುಭದ್ರೆಯನ್ನು
ಜೊತೆಯಾಗಿಸಿಕೊಂಡು ಬಂದ
 
ಐದು ಜನರಲ್ಲಿ ಹಂಚಿಹೋದವಳೆಂದೇ
ಇರಬೇಕು ದುರ್ಯೋಧನ ದುಶ್ಯಾಸನ
ಕೀಚಕ ಕರ್ಣರು ನನ್ನೆಡೆ ಹಾಗೆ ನೋಡಿದ್ದು
ಎಷ್ಟು ಗಂಡಂದಿರಿದ್ದೇನುಪಯೋಗ ನನ್ನ
ಸೆರಗು ಸಭೆಯಲಿ ಚೆಲ್ಲಾಡಿ ಹೋಯಿತು
 
ಭೀಮಸೇನನೊಬ್ಬ ಕೀಚಕನ ಮುಗಿಸಿದ
ದುರ್ಯೋಧನನ ತೊಡೆ ಸೀಳಿ ದುಶ್ಯಾಸನನ
ಎದೆರಕ್ತ ಬಗಿದು ನನ್ನ ತುರುಬು ತಿದ್ದಿದ
ಆದರೇನು ಅಭಿಮನ್ಯುವಿನ ಮಹತು
ನನ್ನ ಮಕ್ಕಳಿಗಿಲ್ಲ ಅವರು ತಮ್ಮ
ಹೆತ್ತವರನುಳಿಸಲು ಹೇಳಹೆಸರಿಲ್ಲದಾದ
ಉಪ ಪಾಂಡವರು ಮಾತ್ರ…..!!
 

‍ಲೇಖಕರು avadhi

March 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. samyuktha

    “ಎಷ್ಟು ಗಂಡಂದಿರಿದ್ದೇನುಪಯೋಗ ನನ್ನ
    ಸೆರಗು ಸಭೆಯಲಿ ಚೆಲ್ಲಾಡಿ ಹೋಯಿತು”…………ee saalugala horatu padisi, kavana mechchugeyayitu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: