ಪೂರ್ಣಚಂದ್ರ ತೇಜಸ್ವಿ ಅವರ ಖ್ಯಾತ ಕೃತಿ ‘ಕರ್ವಾಲೋ’ ಜರ್ಮನ್ ಅನುವಾದ ಇಂದು ಲೋಕಾರ್ಪಣೆಗೊಂಡಿತು.
ಪ್ರೊ ಬಿ ಎ ವಿವೇಕ ರೈ ಹಾಗೂ ಕತ್ರಿನಾ ಬಿಂದರ್ ಅವರು ಈ ಕೃತಿಯನ್ನು ಅನುವಾದಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜೇಶ್ವರಿ ತೇಜಸ್ವಿ ಅವರು ಕೃತಿ ಬಿಡುಗಡೆ ಮಾಡಿದರು. ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರು ಕೃತಿಯ ಮಹತ್ವವನ್ನು ವಿವರಿಸಿದರು.
ಮ್ಯಾಕ್ಸ್ ಮುಲ್ಲರ್ ಭವನದ ನಿರ್ದೇಶಕ ಡಾ ಕ್ಲಾಸ ಹೇಮಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಬಿ ಎಲ್ ಶಂಕರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ-
ಓಹ್…..
ಅಪರೂಪದ ಪುಸ್ತಕ, ಅಪರೂಪದ ಫೋಟೋಗಳು.
ಭೌಗೋಳಿಕ ದೂರದಲ್ಲಿರುವ ಒಂದೇ ಕಾರಣಕ್ಕೆ ಇಂಥ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳುವ ನನ್ನಂಥವರಿಗೆ ಫೋಟೋ ಮೂಲಕ ದರ್ಶನ ಮಾಡಿಸುವ ಅವಧಿಗೆ ಅನಂತ ಧನ್ಯವಾದ.
NICE COVERAGE AVADHI