ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜು ಕವಿತೆ: ನಿಷೇಧಿಸಲಾಗಿದೆ

– ವಸಂತಸೇನೆ

( ಮಂಜುನಾರಾಯಣ್. ಕೆ.ಎಲ್ )

 

 

ದಟ್ಟ

ಕಾಡಿನಕ್ಕಿ

ಪುಟ್ಟ

ನಗರಕ್ಕೆ

ದೂಡಲ್ಪಟ್ಟು

ಬಂಗಾರದ

ಪಂಜರದಿ

ರಕ್ಷಣೆ ನೀಡಿ

ಸರಪಳಿಗಳ ಬಿಗಿದು

ಸಿಂಗರಿಸಲಾಯಿತು

ಹಾರಾಟಕ್ಕಾಗಿ

ಹೋರಾಡಿದ

ಹಕ್ಕಿಗೆ

ಸೂತ್ರೀಕರಿಸಿದಂತೆ

ಹಾರಾಡುವ

ಸ್ವಾತಂತ್ರ್ಯ

ಲಭಿಸಿದೆ

 

ಮಾಂಸ ತಿನ್ನುವ

ಕಾಡಿನಕ್ಕಿಗೆ

ಹಾಲು-ಅವಲಕ್ಕಿಯ

ಶ್ರೇಷ್ಟತೆಯ

ಶಿಕ್ಷಣ ನೀಡಿ

ಯಾರದೋ

ಕನಸು ಕಾಣುವಷ್ಟು

ಪರಕೀಯವಾಗಿದೆ

 

ಹಕ್ಕಿಯ

ರೆಕ್ಕೆಯ

ಪ್ರತಿಗರಿಯೂ

ಪ್ರತ್ಯೇಕತೆಯ

ಬಯಸಿ

ರೆಕ್ಕೆ

ಮುರಿದು

ಹಕ್ಕಿ

ಬಳಲಿ

ಪಕ್ಷಿಯೊಳಗಣ

ಪ್ರಾಣ ಪಕ್ಷಿಯು

ರೆಕ್ಕೆ ಬಿಚ್ಚಿದೆ

 

ಆದರೂ

ಹಾರಬಹುದೆಂಬ

ಭಯದಿ

ಪಂಜರ – ಸರಪಳಿಗಳ

ರಕ್ಷಣೆ

ಭದ್ರಪಡಿಸಿ

ಸ್ವಾತಂತ್ರೋತ್ಸವವನ್ನು

ಘೋಷಿಸಲಾಗಿದೆ

 

ಹಕ್ಕಿಯ

ಈ ಸ್ಥಿತಿಗೆ

ಅಳುವವರೇ

ಇಲ್ಲವಾಗಿದ್ದು

ಇಲ್ಲಿ

ಅಳುವುದನ್ನೂ

ನಿಷೇಧಿಸಲಾಗಿದೆ.

 

 

 

‍ಲೇಖಕರು G

29 April, 2011

1 Comment

  1. Pavanaja U B

    ಪ್ರಾಥಮಿಕ ಶಾಲೆಯಲ್ಲಿ ಓದಿದ “ನಾನು ಪಂಜರದ ಪಕ್ಷಿ” ನೆನಪಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading