ಬೇಂದ್ರೆ ಅಂದ್ರೆ..

ಸತ್ಯಕಾಮ ಶರ್ಮಾ ಕಾಸರಗೋಡು

ಮಳೆ
ಬರ
ಬೇಕಾದರೆ ಏನು ಬೇಕೋ
ಅವೆಲ್ಲವೂ ಅಲ್ಲಿತ್ತು
ಗಾಳಿ ಸುಯ್ಯುತಲಿತ್ತು
ಮೋಡ ಕವಿದಿತ್ತು
ಆದರೂ ಮಳೆಯಾಗಲಿಲ್ಲ
ಯಾಕೆ ಮತ್ತೂ?

ಅದಾವುದೋ ಮಾಂತ್ರಿಕ ಸ್ಪರ್ಶ
ಇಲ್ಲವಾದಲ್ಲಿ ಇಲ್ಲವೇ?
ಇಲ್ಲ ವರ್ಷ!

ಇಲ್ಲವಾದರೂ ಹುಟ್ಟು
ಹೃದಯ ಮಿದುಳು ಪುಪ್ಪುಸ
ಉದರ ಯಕೃತ್ತು
ಮತ್ತಿತರವುಗಳೆಲ್ಲವನೂ ತೊಗಲಿನೊಳಗಿಟ್ಟು
ಜೀವತಳೆಯಲು ಕಾದ ಹಾಗೆ

ಆ ಇನ್ಯಾವುದೋ ಇದೆಯಲ್ಲ
ಅದನದರೊಳಗೆ ತರುವುದು ಹೇಗೆ?
ಅದು ಯಾರ ಕೈಯಲ್ಲಿ ಇದೆ
ಇದೆಯಾದರೆ ಅವರ ಅವನ ಅವಳ
ಅಂತರಾಳದಲ್ಲಿ ಏನಿದೆ?

ಸೇರಿಸಿದರೆ ಪೇರಿಸಿದರೆ ಶಬ್ದಗಳ ಬರಿ ಸಂತೆ
ಆಗದದು ಆ ಗಾರುಡಿಗ ಬರೆದಂತೆ
ಅAದ ಗಂಧದ ನಂಟಿರದ ಹೂ
ಬರಿ ಕಾಗದದ ಹಾಗಾದಂತೆ

ಬೇಯುವುದು ಸುಲಭ
ಬೆಂದುದರಲ್ಲಿ ತರಲು ಒಂದು ಹದ
ಹೊರಡಿಸಲು ನಾದದ ನವನೀತ
ಸದಾ ಕಾಯ ಬೇಕು
ಕಾಯದೊಳಗಾ. . . ಮಾಯೆ ಜೀವ ಬೇಕು

ಬೇಂದ್ರೆಯಾಗುವುದಿಲ್ಲ ಬೆಂದವರೆಲ್ಲ
ಕವಿತೆಯಾಗುವುದಿಲ್ಲ ಕೊರಗಿದ್ದೆಲ್ಲ
ಪಾತರಗಿತ್ತಿ ಮೊದಲಗಿತ್ತಿ ಆಗುವ ಪವಾಡ
ಅದು ಧಾರವಾಡದ ಪೇಡ ಮತ್ತದರ ಕೈವಾಡ

ಅದರ ಸಿಹಿ ಸವಿಯುವ ಭಾಗ್ಯ
ನಮಗೆ ದಕ್ಕಿದೆ
ಅದರ ಪಾಕ ಅವರ ಹಕ್ಕು
ನಮ್ಮದನು ನಾವು ಹುಡುಕಬೇಕಿದೆ

‍ಲೇಖಕರು avadhi

January 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಒಳ್ಳೆಯ ಕವಿತೆ. ಬೆಂದವರೆಲ್ಲಾ ಕವಿತೆಯಾಗುವುದಿಲ್ಲ… ಒಳ್ಳೆಯ ಸಾಲುಗಳು

    ಪ್ರತಿಕ್ರಿಯೆ
  2. Sathyakama Sharma K

    ಐದನೇ ಚರಣದ ಮೂರನೇ ಸಾಲನ್ನು ‘ಅಂದ ಗಂಧದ ನಂಟಿರದ ಹೂ’ ಎಂದು ಓದಿಕೊಳ್ಳಬೇಕಾಗಿ ವಿನಂತಿ. ಇಲ್ಲಿ ‘ತಂತ್ರಾಮ್ ಶರಾಕ್ಷಸ’ ನ ಹಾವಳಿಯಿಯಿಂದ ಏನೋ ತಪ್ಪಾಗಿದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: