ಬಂದೆ ಜೋಗಿ ಬಾ ಬಾರೋ ಜೋಗಿ ಏನ ಹೊತ್ತು ತಂದಿ…ಎಂದು ಕೇಳಿದ್ದು ದ ರಾ ಬೇಂದ್ರೆ. ಈಗ ಕೇಳುತ್ತಿರುವುದು ನಾವು. ಕಳೆದ ೧೫ ದಿನಗಳಿಂದ ಶ್ರೀರಾಮಚಂದ್ರನಂತೆ ವನವಾಸ ಶಿಕ್ಷೆಯನ್ನು ತಾವೇ ತಾವಾಗಿ ವಿಧಿಸಿಕೊಂಡಿದ್ದ ಜೋಗಿ ಈಗ ಬೆಂಗಳೂರಿನಲ್ಲಿ ಹಾಜರಾಗಿದ್ದಾರೆ. ಏನ ಹೊತ್ತು ತಂದಿ..? ಎಂಬ ಪ್ರಶ್ನೆ ಕೇಳುವ ಮುನ್ನವೇ ಅದರ ಗುರುತು ಹಿಡಿದವರಂತೆ ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ.. ಎಂಬ ಬರಹವನ್ನು ಬ್ಲಾಗ್ ಗೆ ತುಂಬಿದ್ದಾರೆ. ಆ ಮೂಲಕ ‘ಬೆಂಗಳೂರಿಗೆ ಬಂದವರು ಬ್ಲಾಗ್ ಗೆ ಬಾರರೆ?..’ ಎಂಬ ಹೊಸ ಗಾದೆಗೆ ನಾಂದಿ ಹಾಡಿದ್ದಾರೆ. ವೆಲ್ ಕಮ್ ಜೋಗಿ.. ನೀವಿಲ್ಲದೆ ಎಲ್ಲಾ ಬ್ಲಾಗಿಗರೂ ಅನುಭವಿಸಿದ್ದಾರೆ ಮಾಗಿ.
ಬಾ ಬಾರೋ ಜೋಗಿ, ಏನ ಹೊತ್ತು ತಂದಿ…
ನಿಮಗೆ ಇವೂ ಇಷ್ಟವಾಗಬಹುದು…




ಈ ರೀತಿ ಹೋಗಿ, ಬರೆದು ಯ್ಯಾಕ್ ಹೋಟ್ಟೆ ಉರುಸ್ತಾರೋ….