ಬರ್ತಾ ಇದೆ 'ಭಾವಯಾನ'

 
****
ಸಂತೋಷ್ ಬಾಗಿಲಗದ್ದೆ 
ಬಹು ಕಾಲದ ಒಂದು ಕನಸು ನನಸಾಗಲು ಕ್ಷಣಗಣನೆ ಶುರುವಾಗಿದೆ.
ಊರ ಕಡೆ ಕೃಷಿ ಮಾಡುತ್ತಾ ಕಥೆ ಗಿಥೆ ಕವಿತೆ ಬರೆದುಕೊಂಡು ಅಲ್ಲೇ ಕಳೆದು ಹೋಗಬೇಕೆಂದು ಮಾಡಿದ ಕಸರತ್ತುಗಳ ಬಾಬತ್ತೆಲ್ಲವೂ ಎತ್ತೆಸೆದದ್ದು ಬೆಂಗಳೂರಿಗೆ. ಅದು ಸೀದಾ ತಗೊಂಡು ಹೋಗಿ ಬಿಟ್ಟಿದ್ದು ಪತ್ರಿಕೋದ್ಯಮದ ತಿರುಗಣಿಗೆ.
ಆ ನಂತರದ್ದು ಕತ್ತಿಯಂಚಿನ ನಡಿಗೆ.
ಯಾರ ವಿರುದ್ಧವೋ ಬರೆದು, ಸತ್ಯವೊಂದರ ಹೊರತಾಗಿ ಬೇರೆ ಯಾವ ಆಯುಧವೂ ಇಲ್ಲದೆ ಎದೆಕೊಟ್ಟ ಸವಾಲುಗಳು, ಬೆದರಿಕೆ, ಕೋರ್ಟು, ಕೇಸು… ಇದೆಲ್ಲದರಾಚೆ ಒಂದಷ್ಟು ಕಾಲವಾದರೂ ನಿಂತು ಯಾರದ್ದೋ ಮನಸಿಗೆ ನವಿಲುಗರಿ ತೀಡಿದಂಥಾ ಬರಹಗಳಲ್ಲಿ ಕಳೆದು ಹೋಗಬೇಕೆಂದು ಸದ್ಯಕ್ಕೆ ನಿರ್ಧರಿಸಿದ್ದೇನೆ.
ಅದರ ಭಾಗವಾಗಿ ಇನ್ನೇನು `ಭಾವಯಾನ’ ಎಂಬ ಕನಸಿನ ಕೂಸು ಕಣ್ತೆರೆಯಲಿದೆ.
ಇದರ ಜೊತೆ ಜೊತೆಗೇ ನನ್ನವೆರಡು ಪುಸ್ತಕಗಳು ಎರಡ್ಮೂರು ತಿಂಗಳಲ್ಲಿಯೇ ಬಿಡುಗಡೆಯಾಗಲಿವೆ. ಆ ಬಗ್ಗೆ ಇಷ್ಟರಲ್ಲೇ ವಿವರ ಕೊಡುತ್ತೇನೆ.
ಸದ್ಯ ಭಾವಯಾನ ರೂಪಿಸುವ ಕೆಲಸ ಚಾಲ್ತಿಯಲ್ಲಿದೆ. ಹೊಸಾ ಆಲೋಚನೆ, ಯುವ ಬರಹಗಾರರ ಲಹರಿ ಸೇರಿದಂತೆ ಹೊಸಾ ಭಾವಲೋಕವೊಂದನ್ನು ಅನಾವರಣಗೊಳಿಸುವ ಕನಸು ಹೊತ್ತು ಭಾವಯಾನ ಆರಂಭಿಸಲು ತಯಾರಿ ನಡೆದಿದೆ.
ಅರುಣ್ ಕುಮಾರ್ ಜಿ ಕುಸುರಿಯಲ್ಲಿ ರೂಪುಗೊಂಡಿರುವ ಟೈಟಲ್ ಅನ್ನಷ್ಟೇ ಸದ್ಯಕ್ಕಿಲ್ಲಿ ಕೊಡುತ್ತಿದ್ದೇನೆ..

‍ಲೇಖಕರು admin

January 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: