ಫೇಸ್ ಬುಕ್ಕಿನಲ್ಲಿ ಕಳೆದುಹೋದ ಉಂಗುರಗಳು!

ಶಚೀತೀರ್ಥದಲ್ಲಿ ಕಳೆದುಕೊಂಡ, ಕೈ ಬೆರಳಿನಿಂದ ಜಾರಿಹೋದ ಉಂಗುರಗಳ ಲೆಕ್ಕವಿಟ್ಟವರ್ಯಾರು?

ಫೇಸ್ ಬುಕ್ಕಿನಲ್ಲಿ ಕಳೆದುಕೊಂಡ ಉಂಗುರಗಳ ಬಗ್ಗೆ ಕವನಗಳು ಕಂಡವು.

ಈ ಉಂಗುರದ ಕಥೆ ಓದಿ, ನೀವು ಕಳೆದುಕೊಂಡ ಉಂಗುರ  ನೆನಪಾಗಲಿ ಅನ್ನೋದು ನಮ್ಮ ಬಯಕೆ

ಜೋಗಿ


ವ್ಯಾಲಂಟೇನ್ಸ್ ಡೇ ಅಂದ್ರೆ ಏನಪ್ಪಾ?
ಮಗಳು ಕೇಳಿದಳು.
ಕಳೆದುಹೋದ ಶಕುಂತಲೆಯ ಉಂಗುರ
ದುಷ್ಯಂತನಿಗೆ ಸಿಕ್ಕ ದಿನ
ಅಂದೆ.
ಮಹಾನಗರ ಎಂಬ
ಶಚೀತೀರ್ಥದಲ್ಲಿ ಕಳೆದುಹೋದ
ನಿಮ್ಮ ಉಂಗುರ
ಸಿಕ್ತಾ?
 
 

ಮಂಜುಳಾ ಬಬಲಾದಿ

ಉಂಗುರವನ್ನೇನೋ ಕಳಚಿಟ್ಟುಬಿಟ್ಟೆ
ಅದರ ಅನುಭೂತಿ ಮಾತ್ರ
ಬೆರಳುಗಳಲ್ಲೇ ಉಳಿದುಬಿಟ್ಟಿದೆ!
 
ಮನಸಾದಾಗಲೆಲ್ಲ
ತಡವುತ್ತವೆ ಬೆರಳುಗಳು
ಉಂಗುರವಲ್ಲದಿದ್ದರೂ
ಅದರನುಭೂತಿಯ ನೆನಪನ್ನು…
 

ರಾಘವೇಂದ್ರ ಜೋಶಿ

ಕಳೆಯಬಹುದು,
ಉಂಗರ ಕಳೆಯಬಹುದು.
ಹಾಗೆಯೇ
ಬೆರಳ ಕಲೆಯೂ.
ಅರೇ?
ಇದ್ಯಾವ ಕಲೆ;
ಬಿಳಿಯ ಕಲೆ;
ಬೆರಳಿಗೇ ಕಳೆ!
 

‍ಲೇಖಕರು G

March 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. narayan raichur

    “ungurada sukha kshana -bhangura” yendu jogi-joshi babalaadigalu nevidisiruvudu chennagide ; ring iddare jeevanadalli SPRING iddante – kaledu hodare suffeRING !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: