ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫಟಾ ಫಟ್ ಸಂದರ್ಶನ

ಲೋಕೇಶ್ ಮೊಸಳೆ ಅವರ “ಮೌಢ್ಯ ನಿವಾರಣೆಗೆ ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಪಾತ್ರ: ಒಂದು ತೌಲನಿಕ ಅಧ್ಯಯನ” ಎಂಬ ಸಂಶೋಧನೆಗೆ ಮೈಸೂರು ವಿಶ್ವವಿಧ್ಯಾಲಯ ಪಿಎಚ್ ಡಿ ಘೋಷಿಸಿದ ಹಿನ್ನೆಲೆ ಅವಧಿ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

ವೈಲ್ಡ್ ಲೈಫ್ ನಿಂದ ಪಿಎಚ್ ಡಿ ಕಡೆಗೆ, ಅದು ಹೇಗೆ?


ವೈಲ್ಡ್ ಲೈಫ್ ಫೋಟೋಗ್ರಾಫಿ ನನ್ನ ಹವ್ಯಾಸ. ಮುಖ್ಯವಾಗಿ ನಾನು ಪತ್ರಕರ್ತ ಮೇಲಾಗಿ ಶಿಕ್ಷಕ ಹೀಗಾಗಿ ಪಿಎಚ್ ಡಿ ಮಾಡಿದೆ.


ಈ ವಿಷಯದ ಆಯ್ಕೆಗೆ ಕಾರಣ?


ಮೌಢ್ಯತೆಯನ್ನು ಎಲ್ಲೆಲ್ಲಿಯೂ ನೋಡ್ತಾಯಿದಿವಿ. ಈ ವಿಷಯದ ನಿವಾರಣೆಗೆ ಮಾಧ್ಯಮಗಳು ಹೇಗೆ ಮುಖ್ಯವಾಗ್ತವೆ ಅನ್ನುವುದು.

ಮೌಢ್ಯ ನಿವಾರಣೆಗೆ ಮಾಧ್ಯಮಗಳು ಯಾಕೆ ಮುಖ್ಯ?


ಜನರ ಮೇಲೆ ಮಾಧ್ಯಮಗಳು ಹೆಚ್ಚು ಪರಿಣಾಮ ಬೀರುತ್ತವೆ. ಹೀಗಾಗಿ ಜನಾಭಿಪ್ರಾಯ ಮೂಡಿಸುವುದಕ್ಕೆ ಮಾಧ್ಯಮಗಳು ಮುಖ್ಯ.

ವೈಲ್ಡ್ ಲೈಫಿಗು, ನಿತ್ಯದ ಲೈಫಿಗೂ ಏನ್ ವ್ಯತ್ಯಾಸ?


ನಮಗಿಂತ ಸುಂದರವಾಗಿ, ಕೆಟ್ಟದ್ದು ಮಾಡದೆ ಬದುಕ್ತಿರೋದು ಪ್ರಾಣಿಗಳು. ಮನುಷ್ಯ ಪಾಪಿ.


ಮೌಢ್ಯ ನಿವಾರಣೆ ಆಗ್ಲೇಬೇಕು ಯಾಕೆ?


ಮನುಷ್ಯ ಮನುಷ್ಯರ ನಡುವೆ ಶೋಷಣೆ ಪ್ರದಾನವಾಗಿದೆ. ಅದು ಕೆಲವರ ಬಂಡವಾಳವೂ ಆಗಿದೆ ಹೀಗಾಗಿ ಮೌಢ್ಯ ನಿವಾರಣೆ ಆಗಲೇಬೇಕು.

‍ಲೇಖಕರು nalike

18 August, 2020

1 Comment

  1. Kiran Bhat

    ….ವೈಲ್ಡ್ ಲೈಫ್…
    ಒಳ್ಳೇ ಪ್ರಶ್ನೆ. ಅಷ್ಟೇ ಖಡಕ್ ಉತ್ಕ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading