ಪ್ರೀತಿ ಇಲ್ಲದ ಮೇಲೆ ಹಾಡು ಹುಟ್ಟೀತು ಹೇಗೆ? ಎಂದು ಕೇಳಿದ್ದರು ಕವಿ ಜಿ ಎಸ್ ಎಸ್. ಹೌದಲ್ಲಾ, ಪ್ರೀತಿ ಇಲ್ಲದ ಮೇಲೆ ಏನಾದರೂ ಒಂದು ಹೊಸದು ಹುಟ್ಟಲು ಸಾಧ್ಯವೇ? ಹೌದು- ಎನ್ನುವುದನ್ನು ಕನಸಿಗರ ದಂಡೊಂದು ಇಲ್ಲಿ ಸಾಬೀತುಪಡಿಸಿದೆ.
ಅಪಾರ ಪ್ರೀತಿಯಿಂದ ಅಡಿಗರನ್ನು ಕಟ್ಟಿಕೊಟ್ಟಿದೆ. ವೆಬ್ ತಾಣಗಳು ಅಕಾಲ ಸಾವನ್ನಪ್ಪುತ್ತಿರುವ ಈ ದಿನಗಳಲ್ಲಿ, ಆನ್ ಲೈನ್ ಎನ್ನುವುದೊಂದು ತಲೆಹರಟೆಯ ತಾಣ ಎಂದು ಭಾವಿಸಿರುವವರ ಮಧ್ಯೆ, ಫೇಸ್ ಬುಕ್ ಎನ್ನುವುದು ಬಾಯ್ಬಡುಕರ ಕೂಟ ಎಂದುಕೊಂಡಿರುವವರ ಮಧ್ಯೆ ಈ ಪ್ರೀತಿ ಮೊಳಕೆ ಒಡೆದಿದೆ.
‘ಬನವಾಸಿ ಬಳಗ’ ಅಲೆಮಾರಿ ದೇವನೂರು ಮಹಾದೇವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿತ್ತು. ದೇವನೂರು ಮಹಾದೇವರ ಬರಹ, ವಿಡಿಯೋ, ಫೋಟೋ, ಅವರ ಕಾರ್ಯಕ್ರಮ, ಅವರ ಬಗೆಗಿನ ಸುದ್ದಿ, ಭಾಷಣ.. ಹೀಗೆ ಎಲ್ಲವೂ ಒಂದೆಡೆ ಕಾವು ಕುಳಿತಿತ್ತು.
ಈಗ ಕುಂಟಾಡಿ ನಿತೇಶ್ ನೇತೃತ್ವದಲ್ಲಿ ‘ಸಂಕಥನ’ ತಂಡ ಅದೇ ರೀತಿಯ ಸಾಹಸಕ್ಕೆ ಕೈ ಹಾಕಿದೆ. ಅವರು ಆರಿಸಿಕೊಂಡದ್ದು ಕನ್ನಡಕ್ಕೆ ಕಟ್ಟುವ ಕನಸನ್ನು ಕೊಟ್ಟ ಅಡಿಗರನ್ನು. ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು..’ ಎಂದಿದ್ದರು ಅಡಿಗರು. ಅಡಿಗರಿಗೂ ಗೊತ್ತಿರಲಿಲ್ಲ ದಶಕಗಳ ನಂತರ ಈ ರೀತಿ ಒಂದು ಕನಸಿಗರ ತಂಡ ತಮಗೆ ಒಂದು ರಸದ ಬೀಡು ಕಟ್ಟಿ ಕೊಡುತ್ತಾರೆ ಎಂದು.
ಸರಿಯಾಗಿ ಓದಿಕೊಂಡ, ಆಳವಾಗಿ ಪ್ರೀತಿಸಿದ ಮನಸ್ಸುಗಳಿಗೆ ಮಾತ್ರ ಈ ರೀತಿಯ ತಾಣ ಕಟ್ಟಲು ಸಾಧ್ಯ ಎನ್ನುವಂತೆ ಈ ತಾಣ ಮೂಡಿಬಂದಿದೆ.
‘ಕಂಗ್ರಾಟ್ಸ್ ಕುಂತಾಡಿ ನಿತೇಶ್ ಹಾಗೂ ಸಂಕಥನ’ ಎನ್ನಲು ಅವಧಿಗೆ ಖುಷಿ
ಈ ಸಾಹಸಕ್ಕೆ ಕೈ ಜೋಡಿಸಿ. ಧನ ಸಹಾಯ ಮಾಡುವ ಮೂಲಕ, ಅಡಿಗರ ಬಗೆಗೆ ಮಾಹಿತಿ ಒದಗಿಸುವುದರ ಮೂಲಕ..
ಒಡೆಯಲು ಮುಂದಾಗಿರುವ ಕಾಲದಲ್ಲಿ ಕಟ್ಟುವಿಕೆಯಲ್ಲಿ ನಿಮ್ಮ ಕೈಯೂ ಇರಲಿ
All the best….
ಒಡೆಯಲು ಮುಂದಾಗಿರುವ ಕಾಲದಲ್ಲಿ ಕಟ್ಟುವಿಕೆಯಲ್ಲಿ ನಿಮ್ಮ ಕೈಯೂ ಇರಲಿ
Congratulations
ಆತ್ಮೀಯ ಅವಧಿ ಬಂಧುಗಳೇ,
ಮತ್ತೊಮ್ಮೆ ಈ ಮೂಲಕ “ನಮ್ಮ ಬನವಾಸಿ” ನೆನಪಿಸಿಕೊಂಡಿದ್ದಕ್ಕೆ ವಂದನೆಗಳು. ಆದರೆ ಈ ಕೆಲಸ ಮಾಡುತ್ತಿರುವುದು{ಈಗಾಗಲೇ ಈ ಹೆಸರಿನಿಂದ ಗುರುತಿಸಿಕೊಂಡಿರುವ} “ಬನವಾಸಿ ಬಳಗ” ಅಲ್ಲ ಎಂದು ವಿನಮ್ರವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇವೆ. ನಾವು “ಬನವಾಸಿಗರು”. ಇದು ದೇವನೂರರಿಗೆ ಪ್ರಿಯವಾದ ಪಂಪನ, ಇಡೀ ಕನಾಱಟಕವನ್ನು ಸೂಚಿಸುವ ಬನವಾಸಿಯ ನೆನಪಿಗೆ ಮತ್ತು ಅವರ ಪ್ರೀತಿಯ ತೋಟದ ಹೆಸರೂ ಅದೇ ಆಗಿರುವ ಕಾರಣಕ್ಕೆ ಇಟ್ಟಿರುವ ಹೆಸರು “ನಮ್ಮ ಬನವಾಸಿ”
ಈ ಬನವಾಸಿಯಲ್ಲಿ[ಕನಾಱಟಕದಲ್ಲಿ} ನಾವು ವಾಸವಿರುವ ಕಾರಣಕ್ಕೆ ನಾವು…….
“ಬನವಾಸಿಗರು”
ADIGARANNU horatu padisi kavya illave illa…kaavyada bhaashe kalisuva guru avaru