ಕೊಳಲ ದನಿಯಿಲ್ಲದೆ…

ಪ್ರಭಾವತಿ ದೇಸಾಯಿ

ಐದು ಗಜಲ್‌ ಸಂಕಲನ ಪ್ರಕಟಿಸಿರುವ ಹಿರಿಯ ಕವಯಿತ್ರಿ ಪ್ರಭಾವತಿ ದೇಸಾಯಿ ಅವರದು ವಿಜಯಪುರ. ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಗಣನೀಯ ಕೊಡುಗೆಯನ್ನು ಕೊಟ್ಟಿದ್ದಾರೆ. 

ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ ನಲ್ಲ
ರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು ಬಿಕ್ಕುತಿದೆ ನಲ್ಲ

ಕಿಟಕಿಯಲಿ ಇಣಿಕಿದ ಶಶಿಯು ಕಚಗುಳಿಟ್ಟು ಕಾಡುತಿರುವನು
ಜಗವ ಮರೆತು ಕಣ್ಣ ದೃಷ್ಟಿಯು ಬಾಗಿಲಿಗೆ ನೆಟ್ಟಿದೆ ನಲ್ಲ

ತೂಗಿದ ಕಂದೀಲ ಬೆಳಕಿಗೆ ಪತಂಗಗಳು ಮುತ್ತಿಡುತಿವೆ
ಕನಸ ಕಂಬನಿ ಜಾರಿ ತಲೆದಿಂಬು ಒದ್ದೆಯಾಗಿದೆ ನಲ್ಲ

ಮುಂಗಾರು ಮೋಡ ಅರ್ಭಟದಲಿ ಮಿಂಚಿ ಗುಡುಗುತಿದೆ ಬಾನಲಿ
ಸಾವಿರ ಕಣ್ಣಿನ ನವಿಲು ಹೆಜ್ಜೆ ಹಾಕಿ ಕರೆಯುತಿದೆ ನಲ್ಲ

ಜೊತೆ ಇರುವಿಕೆ ಜಡ ಬದುಕಿಗೆ ಉತ್ಸಾಹವ ತುಂಬುತ್ತಿತ್ತು
ಏಕಾಂಗಿ ಬಿಸಿ ಉಸಿರಿಗೆ ಮುಡಿದ ಮೊಗ್ಗು ಕಮರಿದೆ ನಲ್ಲ

ಬಳಲಿದ ದೇಹಕೆ ಒಲವ ಮುತ್ತಲ್ಲದೆ ಮತ್ತೇನು ಬೇಕು
ಅಗಲಿಕೆಯ ಚಿಂತೆ ಚಿತೆಯಾಗಿ”ಪ್ರಭೆ”ಯ ದಹಿಸುತಿದೆ ನಲ್ಲ

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: