ಬೇಕಾಗಿದೆ…

ಡಾ ಸುರೇಶ ನೆಗಳಗುಳಿ

ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸಕ ಮಿಶ್ರ ಪದ್ಧತಿ ವೈದ್ಯ ಪ್ರಾಧ್ಯಾಪಕ ಮತ್ತು ಬರಹಗಾರರು. ಏಳು ಸಂಕಲನಗಳ ಪ್ರಕಟ.

ಸುಡುವ ಬಿಸಿಲಿನ ಝಳಕೆ ನೆರಳ ನೀಡುವ ಕೊಡೆಯು ಬೇಕಾಗಿದೆ
ಬಿಸಿಯುಸಿರ ತನಿಗೊಳಿಸಿ ಮುದ ಕೊಡುವ ಹನಿಯು ಬೇಕಾಗಿದೆ

ರವಿಯನ್ನು ತಡೆಯಲು ಗಗನವನು ಮುತ್ತಿದ ಮುಗಿಲಿಗೆ ಸಾಧ್ಯವೇನು
ಮನವನಾವರಿಸಿದ ದುಗುಡವ ಕಳೆವ ಒಲವಿನ ಸೆರೆಯು ಬೇಕಾಗಿದೆ

ಭ್ರಮರಕ್ಕೆ ಸಿಹಿಯುಣಿಸಲು ಮೊಗ್ಗರಳಿದ ಹೂವು ನಗುವುದೇನು ತಾನು
ಬೆಸೆದು ಹೊಸೆಯುತ ಒಲಿದು ನಲಿಯಲು ಪ್ರೇಮದ ಕರೆಯು ಬೇಕಾಗಿದೆ

ದಡವನ್ನು ಬಡಿಯುತ್ತ ಕಡಲೇನು ಮರಳ ರಾಶಿಯ ನುಂಗಿಯೇ ಬಿಡುವುದೇ
ಸುಖದಿ ಕುಣಿಯಲು ಜೊತೆಗಿರುವ ನಲ್ಲೆಯ ಸೊಗದ ನೆಲೆಯು ಬೇಕಾಗಿದೆ

ಚಂದಿರಗೆ ಕೊರಗೇನು ತಾರೆ ಸಾವಿರ ಮಿನುಗುತಿರಲು ಬಾನಿನುದ್ದಗಲ
ಕಣ್ಣು ಹೊಳೆಯುತಲಿರಲು ಮನ ಸೆಳೆದವಳ ಕಿಲಕಿಲ ನಗೆಯು ಬೇಕಾಗಿದೆ

ವರ್ಷಧಾರೆಗೆ ತೇವಗೊಳ್ಳುವ ಸಫಲ ಬಯಕೆ ಬುವಿಗೆ ಇರುವುದು ಮಿಥ್ಯವೇ
ಜಿನುಗಿದೆದೆಗೆ ನಲ್ಮೆತುಂಬಿ ಹರಿವ ಸರಾಗ ಒರತೆಯ ಸೆಲೆಯು ಬೇಕಾಗಿದೆ

ಎಲೆಯ ಮೇಲಿರುವ ಹಿಮದ ಹನಿ ಮುತ್ತಾಗ ಬಹುದೇ ‘ಸುರೇಶ’ ಹೇಳು
ಒಲುಮೆ ಬಯಸಿದ ತೇಗೊಂಡ ಅಧರಕೆ ಪ್ರೀತಿಯ ಸವಿಯು ಬೇಕಾಗಿದೆ

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: