ಇತ್ತೀಚೆಗೆ ನಮ್ಮ ದೇಶದ ಕಲವು ಸ್ಥಳಗಳಲ್ಲಿ ಲೆನಿನ್, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಶ್ಯಾಮ್ ಪ್ರಸಾದ್ ಮುಖರ್ಜಿಯವರ ಮೂರ್ತಿಗಳನ್ನು ವಿರೂಪಗೊಳಿಸಲಾಯಿತು/ಧ್ವಂಸಗೊಳಿಸಲಾ ಯಿತು. ಇಂತಹ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ಜರುಗಿದವು.
ಕರ್ನಾಟಕ ಸಂಗೀತದ ಖ್ಯಾತ, ಸಮಾಜಮುಖಿ ಗಾಯಕ ಟಿ ಎಮ್ ಕೃಷ್ಣ ತಮ್ಮ ಸ್ನೇಹಿತ, ಪ್ರಸಿದ್ಧ ಬರಹಗಾರ ಪೆರುಮಾಳ್ ಮುರುಗನ್ ಅವರ ಮೂರ್ತಿಭಂಜನೆಯ ವಿರುದ್ಧ ಬರೆದಿರುವ ಕವನಕ್ಕೆ ರಾಗಸಂಯೋಜಿಸಿ ಹಾಡಿದ್ದಾರೆ. ಈ ಪರಿಯ ಮೂರ್ತಿಭಂಜನೆ ಆ ಮೂರ್ತಿಗಳನ್ನು ತಯಾರಿಸಿದ ಶಿಲ್ಪಿಗಳಿಗೆ ಅವಮಾನ ಮಾಡಿದಂತೆಯೂ ಕೂಡ ಎಂಬುದು ಕೃಷ್ಣ ಅವರ ಅಭಿಮತ.
ಮ ಶ್ರೀ ಮುರಳಿ ಕೃಷ್ಣ
0 ಪ್ರತಿಕ್ರಿಯೆಗಳು