ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾದೆ


ನಾನು ಪುತ್ತೂರಿನ ಕೊಂಬೆಟ್ಟುವಿನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಬಿಡಾರ ಮಾಡಿಕೊಂಡಿದ್ದಾಗ 1961ರಲ್ಲಿ ಒಂದು ದಿನ ಒಂದು ಕಾರು ನಮ್ಮ ಮನೆ ಮುಂದೆ ಬಂದು ನಿಂತಿತು. ಅದರಿಂದ ಇಳಿದು ಇಬ್ಬರು ಅಪರಿಚಿತರು ನಮ್ಮ ಮನೆ ಮುಂದೆ ಬಂದು ನಿಂತರು. ಬಂದವರು ಅಪರಿಚಿತರು ಎಂದು ಗೊತ್ತಾಗಿ ಗಾಬರಿಗೊಂಡೆ. ಮನೆಯೊಳಗೆ ಬಂದವರೇ ತಮ್ಮ ಪರಿಚಯ ಮಾಡಿಕೊಂಡರು. ಅವರು ಬೆಂಗಳೂರು ಪ್ರಜಾವಾಣಿ ಪತ್ರಿಕೆಯ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪಾದಕ ಬಳಗದ ಇಬ್ಬರು ಹಿರಿಯರಾದ ಎಂ.ಬಿ. ಸಿಂಗ್ ಮತ್ತು ಇ.ಆರ್. ಸೇತೂರಾವ್.
`ನಿಮ್ಮನ್ನೇ ಹುಡುಕಿಕೊಂಡು ಬೆಂಗಳೂರಿನಿಂದ ಬಂದಿದ್ದೇವೆ’ ಎಂದರು. `ನಿಮ್ಮ ಬರಹಗಳನ್ನು ಓದಿದ್ದೇವೆ. ಸಾಹಿತ್ಯ ಚಟುವಟಿಕೆಗಳ ಬಗೆಗೆ ಕೇಳಿದ್ದೇವೆ. ನೀವು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಪುತ್ತೂರಿನಿಂದ ವರದಿಗಾರರಾಗಿರಬೇಕು ಎಂದು ಕೇಳಿಕೊಳ್ಳಲು ಬಂದಿದ್ದೇವೆ’ ಎಂದರು. ನನಗೆ ಆಶ್ಚರ್ಯ ಮತ್ತು ಆತಂಕ. ಆವರೆಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಗೊತ್ತಿತ್ತೇ ಹೊರತು, ವರದಿ ಮಾಡುವುದು ತಿಳಿದಿರಲಿಲ್ಲ. ಆದರೂ ಅವರ ಒತ್ತಾಸೆ ಕೋರಿಕೆಗೆ ಒಪ್ಪಿಕೊಂಡೆ. ಹೊಸ ವೃತ್ತಿಯೊಂದನ್ನು ಕಲಿಯುವ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿದೆ. ಹೀಗೆ 1961ರಿಂದ ನಾನು ಪುತ್ತೂರಿನಲ್ಲಿ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾದೆ.
ಪೂರ್ಣ ಓದಿಗೆ ಭೇಟಿ ಕೊಡಿ : ಬಿ ಎ ವಿವೇಕ ರೈ

‍ಲೇಖಕರು avadhi

4 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading