ಪ್ರಕಾಶ್ ಕೊಡಗನೂರ್ ಕವಿತೆ – ದರ್ಶನ…

ಪ್ರಕಾಶ್ ಕೊಡಗನೂರ್

ಅವರು
ತೀರಿಕೊಂಡರು !

ಸಹಜವಾಗೇ ಸಹಧರ್ಮಿಣಿಯ
ಆಕ್ರಂದನ ಮುಗಿಲುಮುಟ್ಟಿತು
ಮಕ್ಕಳಿಬ್ಬರೂ
ಕಚೇರಿಗೆ ರಜೆ ಹಾಕಿದರು
ನೆಂಟರಿಷ್ಟರಾದಿಯಾಗಿ
ಸ್ನೇಹಿತರು ಪರಿಚಿತರೆಲ್ಲ
ಅಂತ್ಯಕ್ರಿಯೆಗೆ ಧಾವಿಸಿದರು !!

ಸತಿಗೆ
ಇನ್ನುಳಿದ ಬದುಕೇ
ಚಿತೆಯಾದಂತೆ ಕಂಡುಬ೦ದರೆ
ಮಕ್ಕಳಿಗೆ ತಂದೆಯ
ಅಗಲಿಕೆಯ ದುಃಖದೊಂದಿಗೆ
ಮು೦ದಿನ ವಿಧಿವಿಧಾನಗಳನ್ನು
ನೆರವೇರಿಸಿ ಕಚೇರಿಗೆ
ಹಾಜರಾಗುವ ಚಿಂತೆ !
ಉಳಿದವರಿಗೆ
ಆದಷ್ಟು ಬೇಗ
ಅಂತ್ಯಕ್ರಿಯೆ ಜರುಗುವಂತಾಗಿ
ಮತ್ತೆ ತಮ್ಮ ಕೆಲಸಗಳಲ್ಲಿ
ಲೀನವಾಗುವ ಸೆಳೆತ !!

ಚುನಾವಣೆಗೆ ಗಿಟ್ಟಬಹುದಾದ
ಓಟುಗಳನ್ನು ಲೆಕ್ಕಿಸುತ್ತ
ಸ್ಥಳಕ್ಕಾಗಮಿಸಿದ ರಾಜಕಾರಣಿಗೆ
ಮುಂದಿನೆರಡು ಅಂತಿಮದರ್ಶನಗಳು
ಕೈತಪ್ಪುವ ಭಯದ ಬೆನ್ನಲ್ಲೇ
ತರಾತುರಿಯಲ್ಲಿ ಉಪಾಯದಿಂದ
ಜಾರಿಗೊಳ್ಳುವ ಬಗೆಯ ಚಿಂತನೆ !!

ಅವರು
ತೀರಿಕೊಂಡರು !

ಪರಂತು ಪ್ರಾಸಂಗಿಕವಾಗಿ
ತೆರೆಮರೆಯಲಿ ಬೇರೂರಿರುವ
ಹಲಬಗೆಯ ದುಃಖಾತಂಕ
ಡಾ೦ಭಿಕತೆ ಪೊಳ್ಳುತನಗಳನ್ನು
ಅನಾವರಣಗೊಳಿಸಿದುದಲ್ಲದೆ
ಆಧುನಿಕತೆಯ ಬರ್ಬರತೆಗೂ
ಕನ್ನಡಿ ಹಿಡಿದು ಹೋದರು !!

‍ಲೇಖಕರು avadhi

March 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: