ಪುಸ್ತಕ ಬಿಡುಗಡೆಯೇ ಶಿವಗಣಾರಾಧನೆ

bharatadri

ಭರತಾದ್ರಿ ಆರ್ 

ದೇಜಗೌ ಇನ್ನಿಲ್ಲ.

ನನಗಂತೂ ತಂದೆಯ ಸ್ಥಾನದಲ್ಲಿದ್ದವರು ಈಗ ಶಾಶ್ವತವಾಗಿ ಮಾಯವಾಗಿದ್ದಾರೆ, ಆದರೆ ನೆನಪಿನ ನಿಧಿಯಿಂದಲ್ಲ.

ಅವರ ಅಗಲಿಕೆಯ ಸುದ್ದಿ ತಿಳಿದೊಡನೆ ನನ್ನ ನೆನಪಿನ ಸುರಳಿಸುತ್ತಿ ಬಿಚ್ಚಿಕೊಂಡಿದ್ದು ಹೀಗೆ:

೧೯೮೮ ರಲ್ಲಿ ನನ್ನ ಅಪ್ಪ ತೀರಿಕೊಂಡರು. ಆಗ ನನಗೆ ಅವರ ‘ ಶಿವಗಣಾರಾಧನೆ’ ನೆರವೇರಿಸುವ ಹೊಣೆ ಹೆಗಲೇರಿತು. ಸಂಪ್ರದಾಯದ ಈ ವಿಧಿಯನ್ನು ವಿಭೂತಿಪಟ್ಟೆ ಹೊಡೆದವರ ನಡುವೆ ನೆರವೇರಿಸಲು ನನಗೆ ಸುತರಾಂ ಇಷ್ಟವಿರಲಿಲ್ಲ. ಏಕೆಂದರೆ ನನ್ನಪ್ಪ ಜಾತಿ ಮೀರಿ ಬದುಕಿದ್ದರು. ದೇಜಗೌ ಗೆಳೆಯರಾದ ಅವರು ತಮ್ಮನ್ನು ವಯಸ್ಕರ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದರು.

oil lampನನ್ನ ಪುಣ್ಯಕ್ಕೆ ನನ್ನ ಅಪ್ಪ ಸಾಯುವ ಎರಡು ತಿಂಗಳ ಹಿಂದೆ ಡೆನ್ಮಾರ್ಕ್ ದೇಶಕ್ಕೆ ಭೇಟಿ ನೀಡಿದ್ದರು. ತಮ್ಮ ಡೈರಿಯಲ್ಲಿ ತಮ್ಮ ಅನುಭವವನ್ನು ದಾಖಲಿಸಿದ್ದರು. ಕೂಡಲೆ ನಾನು ಆ ಹಸ್ತಪ್ರತಿಯೊಡನೆ ದೇಜಗೌ ಅವರ ಬಳಿ ಧಾವಿಸಿದೆ.

ಅವರು ಹೇಳಿದರು,’ ನೀನು ನಿನ್ನ ಅಪ್ಪನ ತಿಥಿ ಮಾಡಬೇಡ. ಬದಲಿಗೆ ಇದನ್ನ ಪುಸ್ತಕರೂಪದಲ್ಲಿ ಪ್ರಕಟಿಸು. ಬಿಡುಗಡೆ ಸಮಾರಂಭಕ್ಕೆ ನಾನೇ ಬರುತ್ತೇನೆ. ಅದೇ ನಿಜವಾದ ಶಿವಗಣಾರಾಧನೆ. ನಿನ್ನಪ್ಪನ ಆತ್ಮ ನಿಜಕ್ಕೂ ನಿನ್ನನ್ನು ಹರಸುತ್ತದೆ’. ನಾನು ಹಾಗೇ ಮಾಡಿದೆ. ಸಾವಿರ ಜನ ನೆರೆದಿದ್ದರು. ದೇಜಗೌ ನನ್ನಪ್ಪನ ಬಗ್ಗೆ ಆಡಿದ ಪ್ರೀತಿಯ ನುಡಿ ಕೇಳಿ ಊಟಮಾಡಿ ತೆರಳಿದರು. ಇದನ್ನ ಹೇಗೆ ಮರೆಯಲಿ?

ದೇಜಗೌ ನನ್ನ ಪ್ರಜ್ಞೆಯ ಅವಿಭಾಜ್ಯ ಅಂಗ. ಅಗಲಿದ ಅವರ ಚೇತನಕ್ಕೆ ನನ್ನ ನಮ್ರ ನಮನ.

‍ಲೇಖಕರು Admin

May 31, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: