ಕೆ.ವಿ.ತಿರುಮಲೇಶ್
ಪ್ರೊ. ದೇ.ಜ.ಗೌ. ಇನ್ನಿಲ್ಲವೆಂದು ತಿಳಿದು ತುಂಬಾ ದುಃಖವಾಯಿತು.
ಕನ್ನಡ ರಿನೇಸೆನ್ಸ್-ನ ಒಂದು ಕೊಂಡಿಯಂತೆ ಇದ್ದವರು ಅವರು. ಒಂದು ಸಂಸ್ಥೆ ಮಾಡಬಹುದಾದ ಕೆಲಸಗಳನ್ನು ಒಬ್ಬರೇ ಮಾಡಿದರು–ಸಂಸ್ಥೆಗಳನ್ನು ಕಟ್ಟಿದರು, ಬೆಳೆಸಿದರು. ಯಾವುದನ್ನೂ ಮುರಿದವರಲ್ಲ.
ಟಾಲ್-ಸ್ಟಾಯಿಯ ಮೂರು ಮಹಾ ಕಾದಂಬರಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು ಎಂಬುದು ನನಗೆ ಗೊತ್ತಿರಲಿಲ್ಲ. ನಾವೆಲ್ಲ ಚೂರು ಪಾರು ಅನುವಾದಿಸಿ ಬೀಗಿಕೊಳ್ಳುತ್ತೇವೆ. ದೇ.ಜ.ಗೌ. ಸದ್ದುಗದ್ದಲವಿಲ್ಲದೆ ಕೆಲಸ ಮಾಡುತ್ತ ಇದ್ದರು.
ನನಗೆ ಅವರ ಹತ್ತಿರದ ಪರಿಚಯ ಇಲ್ಲದೆ ಇದ್ದರೂ, ಅವರ ಕುರಿತು ಸದಾ ಗೌರವ ಇಟ್ಟುಕೊಂಡಿದ್ದವನು ನಾನು. ಸದಾ ಹಸನ್ಮುಖಿಯಾದ ಅವರನ್ನು ಒಮ್ಮೆ ಕಂಡವರು ಮರೆಯಲಾರರು ಎನ್ನುವುದು ನನ್ನ ನೆನಪಿನಲ್ಲಿದೆ.
ಅವರ ಬದುಕು ಇತರ ಕನ್ನಡಿಗರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇನೆ.
ಮುಖಪುಟ ಚಿತ್ರ : ನಿವೇದಿತಾ ಲೋಕೇಶ್
0 ಪ್ರತಿಕ್ರಿಯೆಗಳು