ಕೇಳು ಜನಮೇಜಯ, ಬುಕ್ ಬಜಾರ್ ಸಾಲಿಗೆ ಈಗ ಮತ್ತೊಂದು ಸೇರ್ಪಡೆ- ‘ಪುಸ್ತಕ ಪ್ರೀತಿ’. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಈ ಬ್ಲಾಗ್ ಪುಸ್ತಕಕ್ಕೆ ಸಂಭಂದಿಸಿದಂತೆ ಒನ್ ಸ್ಟಾಪ್ ಶಾಪ್ ಆಗುವ ಕನಸು ಹೊಂದಿದೆ. ಪುಸ್ತಕದ ಬಗ್ಗೆ ಮಾಹಿತಿ, ವಿಮರ್ಶೆ ನೀಡುವುದೇ ಅಲ್ಲದೆ ರಾಜ್ಯಾದ್ಯಂತ ತನ್ನದೇ ಮಾರಾಟ ಜಾಲವನ್ನು ಹೊಂದುವ ಯೋಚನೆ ಇದೆ. ಪುಸ್ತಕವೆಂದರೆ ಪುಸ್ತಕವಲ್ಲ- ಅರಿವಿನ ಗೂಡು ಎಂಬ ಆಶಯದಲ್ಲಿ ನಂಬಿಕೆ ಹೊಂದಿರುವ ಈ ಬ್ಲಾಗ್ ಅಚ್ಚುಕಟ್ಟಾಗಿ ಟೇಕ್ ಆಫ್ ಆಗಿದೆ. ಈ ಬ್ಲಾಗ್ ‘ಚಿಂತನ’ ಸಂಸ್ಥೆಯ ಹಲವು ಯೋಜನೆಗಳಲ್ಲಿ ಒಂದು.

ನೀವು ಪುಸ್ತಕ ಪ್ರೀತಿಸುತ್ತೀರಾ? ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್‘ ಇದು. ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ. ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ. ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ. ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ. ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.
ಪುಸ್ತಕ ಪ್ರೀತಿಸಲು ಬನ್ನಿ
ನಿಮಗೆ ಇವೂ ಇಷ್ಟವಾಗಬಹುದು…





great idea. ಇಂಥದ್ದೊಂದು ಬೇಕಿತ್ತು. ನೀವು ಮಾಡಿದ್ದೀರಿ. ಪುಸ್ತಕ ಪ್ರೀತಿ ಬೆಳೆಯಲಿ. ನಾನು ಓದಿದ್ದರ ಬಗ್ಗೆ ಬರೆಯುತ್ತಿರುತ್ತೇನೆ, ನಾಲ್ಕೇ ಸಾಲಾದರೂ ಸರಿ
-ಜೋಗಿ
Thank You
ನಿಮ್ಮ ಈ ಪ್ರಯತ್ನ ತುಂಬಾ ಶ್ಲಾಗನಿಯ. ನಿಮ್ಮ ಜೊತೆ ನಾವು ಕೈಜೋಡಿಸುತ್ತೇವೆ. ನಾನು ಓದಿದ ಎಸ್. ಭೈರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಹೊತ್ತಿಗೆಯ ಬಗ್ಗೆ ಕವನದ ಮೂಲಕ ಬರೆದಿರುವೆ.
ಇನ್ನು ಹಲವಾರು ಪುಸ್ತಕಗಳ ಬಗ್ಗೆ ಬರೆದು ಕಳಿಸುವೆ.
ಧನ್ಯವಾದಗಳೊಂದಿಗೆ.
ಕುಮಾರಸ್ವಾಮಿ (ಕುಕೂಊ)
ಪುಣೆ
** ತಬ್ಬಲಿಯು ನಿನಾದೆ ಮಗನೆ **
‘ತಬ್ಬಲಿಯು ನಿನಾದೆ ಮಗನೆ’
ಎಂಬ ಹೊತ್ತಿಗೆ ಓದಿದೆನಗೆ|
ಗೋವುಗಳೆಡಗಿನ ಒಲವು ಎನ್ನಲಿ
ನೂರ್ಮಡಿ ಪುಟಿದೆದ್ದಿತು||
‘ಕಾಳಿಂಗ’ಜ್ಜನ ನಿಜ ನಂಬಿಕೆಯು
ಭಾರತ ಜನತೆಯ ಮನದ ಬಿಂಬವು|
ಮೊಮ್ಮಗ ‘ಕಲಿಂಗ್’ ನ ಆಧುನಿಕ ನಿಲುವು
ಸಡಿಲಾದ ನಮ್ಮ ನಂಬಿಕೆಯ ತೋರಿಸುವ ಪಾತ್ರವು||
ಮೂಖ ಮಾತೆ ‘ತಾಯವ್ವ’ನ ನಡೆತೆಯು
ಹೇಳುತಿದೆ ಸನಾತನ ನಂಬಿಕೆಯ ಆಳವನು|
ಅವರಿವರೇಳುವಂತೆ ಗೊಡ್ಡು ಸಂಪ್ರದಾಯವಿದಲ್ಲ
ತಿಳಿಸುತಿದೆ ಭಾರತ ಜನಗಳ ಬದುಕಿನ ರೀತಿಯು||
ಭೈರಪ್ಪನ ನಿಜ ಭಾವ ಸೆಲೆಯು
ಹೊತ್ತಿಗೆಯ ಸಾಲಾಲ್ಲಿ ಬಿತ್ತಿರಲು|
ಅಕ್ಷರ ರೂಪದಲಿ ಚಿಗುರೊಡೆದಿರಲು
ಅದನು ಓದಿದ ನಾನು ಮೂಖವಿಸ್ಮಯನು||
ಗೋತಾಯಿಯಡೆಗಿನ ಪಿರಿದಾದ ಪದಪು
ಅದುವೆ ಭಾರತಾಂಬೆಯ ನೆಲದ ಸೊಗಸು
ಮನದಲ್ಲಿ ನೆಚ್ಚು ಇನಿತು ಹೆಚ್ಚು ಗೊಳ್ಳಲು
ಪ್ರೇರಕವಾಹಿತು ಭೈರಪ್ಪನ ಹೊತ್ತಿಗೆಯು||
ಗೋವಿನೆಡಗಿನ ನಮ್ಮ ಎಣಿಕೆಯು
ಪಾಶ್ಚಿಮಾತ್ಯರಂತೆ ಬದಲಾಗುತಿರಲು|
ಅದರ ತಪ್ಪು ಸರಿಗಳ ಎಚ್ಚರಿಕೆ ನುಡಿಗಳು
ತರ್ಕವಾಗಿ ಹೊತ್ತಿಗೆಯಲಿ ಮೂಡಿಹವು||
ಗೋವಿಗಳ ಇಂದಿನ ವ್ಯತೆಯ ಕಥೆಯನ್ನು
ಕಣ್ಣಿಗೆ ಕಟ್ಟುವ ರೋಚಕ ನಿರೂಪಣೆಯು|
‘ತಬ್ಬಲಿಯು ನೀನಾದ ಮಗನೆ ಹೊತ್ತಿಗೆ’ ಸಾರವು
ನೀವು ಓದಿರೆಂಬ ನನ್ನ ಕೋರಿಕೆಯ ಒತ್ತಾಸೆಯು||
ಪದಪು=ಭಕ್ತಿ
ಎಣಿಕೆ=ಭಾವ
ನೆಚ್ಚು= ನಂಬಿಗೆ, ವಿಶ್ವಾಸ
ಇನಿತು= ಸ್ವಲ್ಪವಾದರು
** ಕುಕೂ…
ಕುಮಾರಸ್ವಾಮಿ
ಪುಣೆ
poornachandra Tejaswi avaru bareda hechina pustaka odiddene, adare avaru bareda ella pustakagala list eddare mattu aa pustakagalu elli siguttade endu tilisidare olleyadu. avaru bareda pustakagalu thumba estavagide
ಯಶೋದ ಅವರ ಕೇಳಿಕೆಯಂತೆ ಪುಸ್ತಕಪ್ರೀತಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳ ಪಟ್ಟಿಯನ್ನು ಶೀರ್ಘದಲ್ಲೇ ಪ್ರಕಟಿಸಲಾಗುವುದು – ವಿಶಾಲಮತಿ
It is going to be a very useful blog.I am with you
It is going to be a very useful blog.I am with you.
good idea sir.khushi aaythu noodri.
“ಪುಸ್ತಕ ಪ್ರೀತಿ”ಗೆ ಅಭಿನಂದನೆಗಳು.