ಪಿಸುಗುಟ್ಟಿದ ಕತ್ತಲ ಮಾತು..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಈಗ ಮತ್ತೆ ಮೈಸೂರಿನಿಂದ ಮತ್ತೊಂದು ಪ್ರತಿಕ್ರಿಯೆ ಕವಿತೆ.

ಬರೆದದ್ದು ನಾಗೇಶ ಮೈಸೂರು

ಈಗ ಓದಿ 

ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ  

EPSON scanner image

ನಾಗೇಶ ಮೈಸೂರು

ನನಗದೊಂದೆ ವಿಸ್ಮಯ
ಸಂಗಾಟದ ಸಂಗತಿ ಗುನುಗು
ನೋಡುವರೆಲ್ಲ ಕಣ್ಣು ಕಿವಿ ಮೂಗು
ನಯ ನಾಜೂಕು ತೆಳ್ಳ ಬೆಳ್ಳಗಿನ ಸರಕು
bite chinಹಾಲುಗಲ್ಲ ಬಿಳುಪು ದಂತದ ಮೈ
ಚೆಂದದ ತುಟಿ ಕದಪು ಮುಂಗುರುಳು
ಕಣ್ಣು ಮೂಗರಳಿಸಿ ಗುಟ್ಟಲಿ
ಆಸ್ವಾದಿಸೊ ಅದೆಷ್ಟೊ ಕಾನನ ಕೊತ್ತಲ
ಸಂದಿ ಗೊಂದಿ ಕಣಿವೆ ಪರ್ವತ ಶಿಖರ
ದೃಷ್ಟಿ ವಿನಿಮಯ ಬೆಳಕಲೆ
ಎಲ್ಲದರ ವ್ಯಾಪಾರವು ಮೌನ ಸಮ್ಮತ.

ಕಣ್ಣಿಗೆ ಪಟ್ಟಿ ಕಟ್ಟಿದ ಗಾಂಧಾರಿ ನಾನು
ಕೋರೈಸುವ ಕಾಮ ಕಣ್ಣಿದ್ದೂ ಕುರುಡು
ನಾ ಪಟ್ಟಿ ಬಿಚ್ಚುವುದು ತಮದಲ್ಲೆ
ಅವರು ಬೆತ್ತಲಾಗುವುದು ಕತ್ತಲಲೆ..

ದೀಪದ ಬೆಳಕು ಕಾಣದ್ದೆಲ್ಲ ಕಾಣುವೆ –
ಅಂಧಕಾರದ ಬಿಸಿಯುಸಿರಲಿ ಅನನ್ಯ
ಅನುಭವಿಸಿದವರನೆ ನಾ ಅನುಭವಿಸುವ
ಅದ್ಭುತ ಮಿಲನ ಸಮಭೋಗದ ಕಾವ್ಯ
ಅವರಿಸಿಕೊಂಡವರಿಬ್ಬರ ನಡುವೆ
ನುಸುಳುವ ಗಾಳಿ, ನುಸುಳದ ನಿರ್ವಾತ
ಎಲ್ಲೆಂದರಲ್ಲೆನ್ನ ದಾಂಧಲೆಯಾಗ ;
ನಿಚ್ಚಳ ನೋಟ, ಗೂಬೆಯ ದೃಷ್ಟಿ
ಆವರಿಸಿಬಿಡುವೆನವರೆಲ್ಲ ಗುಟ್ಟನು
ಅವರೂ ಕಾಣದ ಅವರೊಳಗ್ಹೊರಗಿನ
ಪ್ರತಿ ಸಂದಿನ ನಡುವಿನ ಬೆತ್ತಲೆಯಾಗಿ.

ಆದರೂ ಮತ್ತೆ ಕಾಡುವ ವಿಸ್ಮಯ
ಹೇಗೂ ಕಾಣದ ತಮದೆ
ಕಣ್ಮುಚ್ಚಿ ಕುರುಡೆ ಅನುಭವಿಸೆ
ಬೆಳಕಲದೇಕೊ ಅಷ್ಟು ಜುಗ್ಗಾಟ, ಜಗ್ಗಾಟ..?
ತುಲನೆ ತಲ್ಲಣ ವಿಮರ್ಶೆ
ಆಕರ್ಷಣೆಗಳ ಬೊಗಸೆ ..
ನಾನೆಂಬ ಕತ್ತಲೆಯೇ ಸೊಗಸೆ..!

‍ಲೇಖಕರು Admin

May 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: