ನೆಲದ ಹೆಗಲೂರಿದ ಗುರುತು..

ಕಿರಸೂರ ಗಿರಿಯಪ್ಪ, ಬಾಗಲಕೋಟ
ಇಳಿಬಿದ್ದ ಮುಗಿಲು
ಎದಿಯಾಗ ಹೊಕ್ಹಂಗ 
ಗುಡಾರದ ಕಾಲುಗಳು ತಲೆಯ ನೇವರಸಿ
ಪಕ್ಕೆಲುಬಲಿ ಸೆಳೆತಗೊಂಡು ಉರುಳಿದಂತೆ
ಈ ಕತ್ತಲ ಸರಳ ಬಂದಿ ಹುಣ್ಣಿಗೆ
ಎಚ್ಚೆರಗೊಂಡ ಕಣ್ಣೆವೆಗಳಲಿ 
ಜಾಲಿಗಂಟಿದ ಜೋಳಿಗೆಗೆ
ಕರುಳುಣಿಸಿದ ಬೀದಿ ಬದಲಿಯಾದ ಸುದ್ದಿ!
ಎದೆಯಬ್ಬಿಸಿ ಬೆವರ ಕುಡಿದ ನೆಲ
ಒಡಲಿಗೆ ಕಪ್ಪು ಬಟ್ಟೆ ಬಿಗಿಸಿಕೊಂಡು
ಕಣ್ಣೀರ ಕಡಲುರಿತದ ರೆಪ್ಪೆಗೆ
ಅಹವಾಲು ಹೊರಡಿಸಿದೆ
ಗುರುತಿನ ಸಾಕ್ಷಿಗಾಗಿ
ಬೇರಿನ್ಹಂಗ ಆಳ ಹೊಕ್ಕ ನೆನಪು
ಚಂದ್ರನ್ಹಂಗ ಇರುಳ ಕುಡಿದ ಕನಸು
ಬೀದಿ ಬದಿಯಲಿ ನೆಲೆಯೂರಿವೆ 
ಇರುಳ ಹಕ್ಕಿಯಾಗಿ
ಹೆಜ್ಜೆಗೆ ಗೆಜ್ಜೆ ಕಟ್ಟಿ 
ಕುಣಿದು ಕುಪ್ಪಳಿಸಿದ ತಮಟೆಗಳು
ಹಾಡಿಗೆ ಕಣ್ಣಾದ ಢಮರುಗದ ಕೋಲ್ಮಿಂಚುಗಳು
ಮೈಯೋಲೆಗಳಾಗಿ ಇಳಿಬಿದ್ದು 
ಉಯ್ಯಾಲೆಯಾದ ಬಿಸಿಯುಸಿರು
ಹೊರಳಾಡಿದವು
ನಿತ್ಯ ಚಕ್ರದ ಸುರುಳಿಯಲಿ
ತಲೆಮಾರುಗಳ ಕಾವುಂಡ ನೆಲೆ
ಹಲವು ಬುರುಡೆಗಳ ಜೀವ ಮಿಡಿತಕ್ಕೆ
ಶತಮಾನದ ಕಸೂತಿಯಾಗಿ
ವಂಶವೃಕ್ಷ ಚಿತ್ರಿಸಿ
ಹದವಾದ ಮಣ್ಣೊಳಗೆ 
ಬೆಸೆದುಕೊಂಡ ಬೀಜಗಳಾಗಿವೆ
ಸಾಲು ದೀಪದ ನಕ್ಷತ್ರಗಳ್ಹಂಗ
ನೆಲದ ಹೆಗಲೂರಿದ ಪುರಾವೆಗಳು 
ವಸಂತದ ಅಕ್ಕರೆಯಲಿ ನಿತ್ಯನೂತನದ ಘೋಷಗಳು

‍ಲೇಖಕರು

December 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: