ಈ ಪುಟ್ಟ ಗುಡಿಸಲು ಮನೆ ನನ್ನ ಹೊಲದಲ್ಲಿದೆ. ಸುಮಾರು 30ವರ್ಷದಿಂದಲೂ ಇದೆ. ನಾನು ಆ ಹೊತ್ತಿನಿಂದ ಈ ಹೊತ್ತಿನವರೆಗೆ ನುಗಡೋಣಿ ಎಂಬ ನನ್ನ ಊರಿಗೆ ಹೋದರೆ ಈ ಗುಡಿಸಲು ಮನೆಯಲ್ಲಿಯೇ ಕಾಲಕಳೆಯುವುದು. ನನ್ನ ಸೃಜನಶೀಲತೆಯನ್ನು ಈ ಸೂರು ಕಾಪಾಡಿದೆ.
ಅಮರೇಶ ನುಗಡೋಣಿ
ನಾನು 1990ರ ಸುಮಾರು ಊರ ಹೊರಗಿನ, ನಮ್ಮ ಹೋಲದ ಪಕ್ಕದಲ್ಲಿದ್ದ ರಾಮಲಿಂಗೇಶ್ವರ ಗುಡಿಯಿದು. ಸಂಜೆ ನಾನು ಈ ಗುಡಿಯಲ್ಲಿ ಕತೆ ಬರೆಯುತ್ತಿದ್ದೆ. ‘ಮಣ್ಣಸೇರಿತು ಬೀಜ’ ಸಂಕಲನದ ಕತೆಗಳನ್ನು ಈ ಗುಡಿಯಲ್ಲಿ ಕೂತು ಬರೆದಿದ್ದೆ.
ಇದು ನಮ್ಮೂರಿನ ಬಸವನ ಗುಡಿ. ಮೊದಲು ಗ್ರಿಲ್ ಗಳು ಇರಲಿಲ್ಲ. ಈಗ ಗ್ರಿಲ್ ಗಳನ್ನು ಹಾಕಿ ಕೆಡಿಸಲಾಗಿದೆ. ಈ ಗುಡಿಯೇ ಶಾಲೆಯಾಗಿತ್ತು. 1966 ರ ಸುಮಾರು ನಾನು ಸರ್ಕಾರಿ ಶಾಲೆಯೆಂಬ ಈ ಗುಡಿಯಲ್ಲಿ ಕುಳಿತು ಅ ಆ ಇ ಈ ಕಲಿತಿದ್ದೇನೆ. ಗುಡಿ ಒಳಗಿರುವ ದೇವರು ಕಲ್ಲಿನ ಬಸವಣ್ಣ. ಈ ನುಗಡೋಣಿ ಬಸವಣ್ಣ ಅಂದಿನಿಂದ ಇಂದಿನವರೆಗೆ ನನ್ನ ಇಷ್ಟದ ದೇವರು. ನನ್ನೂರಿಗೆ ಹೋದರೆ ಈ ಮೂರು ಸ್ಥಳಗಳು ನನ್ನ ಜೀವ ನೆಲೆಗಳಾಗಿವೆ. ನೋಡಿಕೊಂಡು ಬರುತ್ತೇನೆ.
ಈ ರಾಮಲಿಂಗವು ನಮ್ಮೂರು ನುಗಡೋಣಿಯಲ್ಲಿ ನನ್ನ ಸಂಬಂಧಿಕರ ಹೊಲದಲ್ಲಿ ಉಳುವಾಗ ಸಿಕ್ಕಿತು. ಇದೇ ಜುಲೈ 2016ರ ತಿಂಗಳು ನೆಲದಿಂದ ಹೊರಗೆ ತೆಗೆಯಲಾಗಿದೆ. ಬಸವನಗುಡಿಯಲ್ಲಿ ಇಡಲಾಗಿದೆ.
0 ಪ್ರತಿಕ್ರಿಯೆಗಳು