ನೂಪುರ ಭ್ರಮರಿ (ರಿ.)
ಮತ್ತು
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.)
ಸಹಭಾಗಿತ್ವದಲ್ಲಿ
ನಾಟ್ಯಚಿಂತನ
ಭರತನ ನಾಟ್ಯಶಾಸ್ತ್ರವನ್ನಾಧರಿಸಿದ ಒಂದು ವಾರದ ಶಾಸ್ತ್ರ -ಪ್ರಾಯೋಗಿಕ ಚಿಂತನೆಯ ಕಾರ್ಯಾಗಾರ/ಶಿಬಿರ
‘ನೂಪುರ ಭ್ರಮರಿ’- ನೃತ್ಯಸಂಶೋಧನ ವಿಶೇಷಾಂಕ ಅನಾವರಣ
ನೃತ್ಯ ಉಪನ್ಯಾಸ-ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ
ಸ್ಥಳ : ದರ್ಬೆ, ಪುತ್ತೂರು. ದಿನಾಂಕ 20 ಎಪ್ರಿಲ್-26 ಎಪ್ರಿಲ್ 2014
ಎಪ್ರಿಲ್ 20,2014ರಂದು ಆರಂಭಗೊಂಡು ವಾರಪರ್ಯಂತ ನೂಪುರ ಭ್ರಮರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿರುವ ‘ನಾಟ್ಯಚಿಂತನ’- ಎಂಬ ನಾಟ್ಯಶಾಸ್ತ್ರದ ಅಧ್ಯಯನಪೂರ್ಣ ಪ್ರಾಯೋಗಿಕ ಶಿಬಿರವು ಜಿಲ್ಲೆಯ ನೃತ್ಯವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸಂಶೋಧಕರಿಗೆ, ಪೋಷಕರಿಗೆ ವರದಾಯಕವಾಗಲಿದೆ. ಇದೇ ಸಂದರ್ಭ ಭಾರತದಲ್ಲೇ ಏಕೈಕ ಮತ್ತು ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸ್ಮರಣಸಂಚಿಕೆಯು ಅನಾವರಣಗೊಳ್ಳಲಿದೆ.
ಈ ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ, ಸಂಶೋಧಕಿ, ಗುರು ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರಮವು ಉದ್ಘಾಟನಾದಿನದಂದು ಜರುಗಲಿದೆ. ಸಮಾರೋಪದ ದಿನದಂದು ‘ನಾಟ್ಯಚಿಂತನೆ’ಯಿಂದ ಪಡಿಮೂಡಲಿರುವ ಅಭ್ಯರ್ಥಿಗಳೇ ನಡೆಸಿಕೊಡಲಿರುವ ನೃತ್ಯಕಾರ್ಯಕ್ರಮವೂ ನಡೆಯಲಿದ್ದು; ವಿದ್ವಾನ್ ಕೂರ್ಗಿ ಶಂಕರನಾರಾಯಣ ಉಪಾಧ್ಯಾಯರ ಉಪನ್ಯಾಸ, ಚಿಂತನ-ಮಂಥನ ನಡೆಯಲಿದೆ.
0 ಪ್ರತಿಕ್ರಿಯೆಗಳು