ನಿಸ್ಸೀಮ ‘ನಿಸಾರ್’
ಮುಕುಂದಾ ಬೃಂದಾ
ರೇಖೆ: ಸತೀಶ್ ಆಚಾರ್ಯ
ಯಾವ ಭಾವದಲಿ
ಬೀಳ್ಕೊಡಲೋ
ಭಾವದೊರೆಯೇ ನಿನ್ನ
ಆ ಭಾವ ಈ ಭಾವವೆಲ್ಲ
ಅಭಾವವಾಗಿಹವೋ
ಭವಪಾಶ ತೊರೆದಿರಲು ನೀ
ಬಾನ ಬೆಳ್ಳಿಚುಕ್ಕಿಗಳೂ
ಮಿನುಗದೇ ಮುಳುಗಿ
ಕುಳಿತಿರಲು ಕಾರ್ಮೋಡದಲಿ
ಬರೆಯಲೇನೋ ನಿನ್ನ
ಸಂಚಲನವಿಲ್ಲದೀ ಸಂಜೆ
ಬರಿ ಟೊಳ್ಳು ಜೊಳ್ಳು ಜೊಳ್ಳೋ
ಕಳ್ಳ ಕೃಷ್ಣನ ಪಾಡಿ
ಜೋಗದ ಸಿರಿಯ ಬೆಳಗಿ
ಎಲ್ಲಿಹೋದೆಯೋ ನೀನಿಂದು
ಹಿಂಡು ಕುರಿಗಳು ನಾವಿಂದೂ
ತಗ್ಗಿ ನಡೆದಿಹೆವೋ
ಕುರುಬನಾರೋ ಅರಿಯದೇ
ಬಂದುಬಿಡು ಬೇಗ ನೀ
ಮತ್ತದೇ ಸಂಜೆ ಬೇಸರವೆನ್ನದೆ
ನಿಸ್ಸೀಮ ‘ನಿಸಾರ್ ’ ನೀನಲ್ಲವೇನೋ ..
0 ಪ್ರತಿಕ್ರಿಯೆಗಳು