ನಿಸಾರ್ ಸರ್: ಲಲಿತಾ ಸಿದ್ಧಬಸವಯ್ಯ ಕವಿತೆ ಶ್ರದ್ಧಾಂಜಲಿ

ನಾವೂ ನಿಮ್ತರಾನೇ..

ಲಲಿತಾ ಸಿದ್ಧಬಸವಯ್ಯ

ರೇಖೆ: ಎಂ ಎಸ್ ಪ್ರಕಾಶ್ ಬಾಬು 

ಆವೊತ್ತು
ರಾಮನ್ ಸತ್ತ ಸುದ್ದಿ
ಕವನ ಮಾಡಿದಿರಿ
ಈವೊತ್ತು
ನೀವು ಹಳೆಯ ಕೋಟು ಕಳಚಿದ್ದು
ನನಗೆ ಸುದ್ದಿಯಲ್ಲ
ಕವನವಲ್ಲ
ಮೂಕಸಂಕಟ

ನಿಮ್ಮ ಕವಿತೆ
ಗಳನ್ನೆಲ್ಲ ಪ್ರೀತಿಸಿದ್ದೆ
ಪದೇಪದೇ ನಾವೂ
ನಿಮ್ತರಾನೇ ಎಂಬುದ
ಸಾಬೀತಾಗಿಸಲು
ಒದ್ದಾಡುವ ಗೆಳತಿಯ
ಮೆಸೇಜುಗಳ ಕಂಡಾಗ
ನೀವು ಅಲ್ಲಿರುತ್ತಿದ್ದಿರಿ
ಇರುತ್ತೀರಿ ಈಮೇಲೂ

ಇರಬಹುದು
ಅವಳ ಕಷ್ಟ
ನಿಮ್ಮಷ್ಟೇ ಚೆನ್ನಾಗಿ
ಅರ್ಥ ಮಾಡಿಕೊಂಡವರು.
ಇರಲಾರರು
ಅದನ್ನು ತಣ್ಣಗೆ
ಕವನ ಮಾಡಿದವರು
ಮಂಜುಗಡ್ಡೆ
ಯೂ ಬೆವರಿಸುತ್ತದೆ

ನಿಮ್ಮವುಗಳ ತರಹವೆ
ಇದಾವೆ ನನ್ನ ‌ಕವನವೂ
ಅಂತನ್ನಲಿ ಜನ ಅಂತ
ಬಯಸಿದ್ದೆ,,, ಅನಲಿಲ್ಲ
ಈಗನ್ನಿಸಿದೆ, ಹಾಗೆ
ನಿಮ್ಮ ಹಾಗಿರಲು
“ನಿಮ್ಮಂತಾಗುವ”
ಅಗ್ನಿಗೊಂಡ ಹಾಯ
ಬೇಕು, ಬೇಕು.

 

‍ಲೇಖಕರು avadhi

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Jayalaxmi Patil

    ‘ನಿಮ್ಮ ಹಾಗಿರಲು ನಿಮ್ಮಂತಾಗಿರಲು ಅಗ್ನಿಗೊಂಡ ಹಾಯಬೇಕು’ ನಿಜ ಲಲಿತಕ್ಕ.

    ಪ್ರತಿಕ್ರಿಯೆ
  2. T S SHRAVANA KUMARI

    ಕಡೆಯ ಪಂಕ್ತಿಗಳ ಮಾತುಗಳು ಮನ ತಟ್ಟುತ್ತವೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: